Site icon Suddi Belthangady

ನಾರಾವಿ: ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ ಮಹಿಳಾ ಬಿಲ್ಲವ, ಯುವ ಬಿಲ್ಲವ ವೇದಿಕೆಯ 167ನೇ ವರ್ಷದ ಗುರುಜಯಂತಿ ಮತ್ತು ಶ್ರೀ ಸತ್ಯನಾರಾಯಣ ಪೂಜೆ

ನಾರಾವಿ: ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ವತಿಯಿಂದ ಮಾ.24ರಂದು 167ನೇ ವರ್ಷದ ಗುರುಜಯಂತಿ ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಪೀಠಾಧಿಪತಿ ಆರ್ಯ ಈಡಿಗ ಮಹಾಸಂಸ್ಥಾನ ಸೊಲೂರು ಬೆಂಗಳೂರು, ಗುರುಕೃಪಾ ಬಲ್ಯೊಟ್ಟು ಇವರ ಉಪಸ್ಥಿತಿಯಲ್ಲಿ ನಾರಾವಿ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಜರಗಿತು.

ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ, ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ನಾರಾವಿ ಇದರ ಪದಾಧಿಕಾರಿಯ ಆಯ್ಕೆ ಮಾಡಲಾಯಿತು.

ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಮಂಜುನಗರ ಹಾಗೂ ಕಾರ್ಯದರ್ಶಿಯಾಗಿ ರಾಮಪ್ಪ ಪೂಜಾರಿ ಶೀಲಡ್ಕ ಆಯ್ಕೆ ಆಗಿರುತ್ತಾರೆ.

ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಸುಮಿತ್ರಾ ಹಾಗೂ ಕಾರ್ಯದರ್ಶಿಯಾಗಿ ಪ್ರಭಾವತಿ ಆಯ್ಕೆಯಾಗಿರುತ್ತಾರೆ.

ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಜಯ ಪೂಜಾರಿ, ಕಾರ್ಯದರ್ಶಿಯಾಗಿ ರಾಜೇಂದ್ರ ಪಿಂಗಾರಕೋಡಿ ಆಯ್ಕೆಯಾಗಿರುತ್ತಾರೆ.

Exit mobile version