Site icon Suddi Belthangady

ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಬಂಗಾಡಿ ಅರಮನೆಗೆ ಭೇಟಿ

ಬೆಳ್ತಂಗಡಿ: ಇತಿಹಾಸ ಹೊಂದಿರುವ ಬಂಗಾಡಿ ಅರಮನೆಗೆ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಮಾ.24 ರಂದು ಭೇಟಿ ನೀಡಿ ಅರಮನೆಯ ಶತಾಯುಷಿ ರವಿರಾಜ್ ಬಲ್ಲಾಲ್ ರವರನ್ನು ಗೌರವಿಸಿ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕ ಹರೀಶ್ ಪೂಂಜಾ, ಹರಿಕೃಷ್ಣ ಬಂಟ್ವಾಳ್, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸನ್ ರಾವ್, ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್, ಮಂಡಲ ಹಾಗೂ ಜಿಲ್ಲಾ ಪದಾಧಿಕಾರಿಗಳು, ಬೂತ್ ಅಧ್ಯಕ್ಷರಾದ ಸಂಜೀವ ಗೌಡ ಕುತ್ರಬೆಟ್ಟು, ನವೀನ್ ಜೈನ್, ಅಯೋಧ್ಯಾ ಆನಂದ ಗೌಡ, ಪಳನಿ ಸ್ವಾಮಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್ ರವರು ಬ್ರಿಜೇಶ್ ಚೌಟ ಹಾಗೂ ಹರೀಶ್ ಪೂಂಜಾ ರವರನ್ನು ಗೌರವಿಸಿದರು.

Exit mobile version