Site icon Suddi Belthangady

ಇಂದು ತಾಲೂಕಿನಾದ್ಯಂತ ಗರಿಗಳ ಭಾನುವಾರ

ಉಜಿರೆ: ಕರಾವಳಿಯಾದ್ಯಂತ ಕಥೋಲಿಕರು ಮಾ.24ರಂದು ಗರಿಗಳ ರವಿವಾರ (ಪಾಮ್ ಸಂಡೇ) ಆಚರಿಸಿದರು.ಈ ಹಿನ್ನಲೆಯಲ್ಲಿ ಚರ್ಚ್‌ಗಳಲ್ಲಿ ವಿಶೇಷ ಆಚರಣೆ, ಬಲಿಪೂಜೆ ನಡೆಸಲಾಯಿತು.ಮುಂದಿನ 1 ವಾರ ಗುರುವಾರ, ಶುಕ್ರವಾರ ಮತ್ತು ಶನಿವಾರ ವಿಶೇಷ ಪ್ರಾರ್ಥನೆ ಪೂಜೆಗಳು ಆಚರಿಸಲಾಗುವ ಪವಿತ್ರ ಸಪ್ತಾಹ ಇಲ್ಲಿಂದ ಆರಂಭಗೊಳ್ಳುತ್ತದೆ.

ಗರಿಗಳ ರವಿವಾರದ ಹಿನ್ನೆಲೆ: ಬೈಬಲ್ ವಿವರಿಸುವ ಪ್ರಕಾರ ಯಹೂದಿಯರ ಕಾಲದಲ್ಲಿ ಪಾಸ್ಕಾ ಪ್ರಮುಖ ಹಾಗೂ ಜನಪ್ರಿಯ ಹಬ್ಬ ಇದರ ಆಚರಣೆಯಲ್ಲಿ ಭಾಗವಹಿಸಲು ಯಹೂದಿಗಳು ಜೆರುಸಲೆಂಗೆ ತೆರಳುವುದು ವಾಡಿಕೆ.ಯೇಸು ಕ್ರಿಸ್ತರು ತನ್ನ ಅನುಯಾಯಿಗಳೊಂದಿಗೆ ಜೆರುಸಲೆಂಗೆ ತೆರಳುತ್ತಾರೆ.ಕ್ರಿಸ್ತರ ಪವಾಡಗಳನ್ನುಕಣ್ಣಾರೆ ಕಂಡವರು ಹಾಗೂ ಅವರಿಂದ ಗುಣಮುಖರಾದವರು ಕ್ರಿಸ್ತರನ್ನು ಬಟ್ಟೆಗಳು ಹಾಸಿ ಹಾಗೂ ‘ಒಲಿವ್’ ಮರದ ಗರಿಗಳನ್ನು ಹಿಡಿದು ಅದ್ದೂರಿ ಹಾಗೂ – ವೈಭವದಿಂದ ಸ್ವಾಗತಕೋರುತ್ತಾರೆ.

ಇದನ್ನು ನೆನಪಿಸಿಕೊಂಡು ಗರಿಗಳ ಭಾನುವಾರ ಆಚರಿಸಲಾಗುತ್ತಿದೆ. ಬಲಿಪೂಜೆಗೂ ಮೊದಲು ಚರ್ಚ್ ಆವರಣದಲ್ಲಿ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ.ವಿಜಯ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ಗರಿಗಳನ್ನು ಆಶೀರ್ವದಿಸಿದರು.

ಬೈಬಲ್‌ನಲ್ಲಿರುವ ಈ ಸನ್ನಿವೇಶವನ್ನು ಸ್ಮರಿಸಿ ಸಂದೇಶ ನೀಡಿದರು. ಭಕ್ತರು ತಂದ ತೆಂಗಿನ ಗರಿಗಳನ್ನು ಆಶೀರ್ವದಿಸಿ ಭಕ್ತರಿಗೆ ಹಂಚಿ ಬಳಿಕ.ಧರ್ಮಗುರುಗಳ, ಜತೆಯಾಗಿ ಈ ಭಕ್ತರು ಕ್ರಿಸ್ತರಿಗೆ ಜೈಕಾರ ಕೂಗುತ್ತ ಮೆರವಣಿಗೆ ಮೂಲಕ ಚರ್ಚ್‌ಗೆ ತೆರಳಿ ಬಲಿಪೂಜೆಯ ವೇಳೆ ಕ್ರಿಸ್ತರ ಕಷ್ಟಗಳ ಕಥನವನ್ನು ನೆನಪಿಸಲಾಯಿತು.

ಈ ಸಂದರ್ಭದಲ್ಲಿ ಚರ್ಚ್ ಪ್ರಧಾನ ಧರ್ಮಗುರು ವ. ಜೇಮ್ಸ್ ಡಿಸೊಜಾ ಹಾಗೂ ವ. ಸುನಿಲ್ ಮಿನೇಜಸ್ ಸಹಕರಿಸಿದರು.

Exit mobile version