Site icon Suddi Belthangady

ಕುತ್ರೋಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ 108 ತೆಂಗಿನಕಾಯಿ ಗಣಹೋಮ, ಸಾಮೂಹಿಕ ಶನೈಶ್ಚರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ- ಆಮಂತ್ರಣ ಪತ್ರಿಕೆ ಬಿಡುಗಡೆ

ನಡ: ಕುತ್ರೋಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡ, ಕನ್ಯಾಡಿ, ಲಾಯಿಲ, ವಾರ್ಷಿಕ ಉತ್ಸವ ಸಮಿತಿ, ಕುತ್ರೋಟ್ಟು ದೊಂಪದಬಲಿ ಸಮಿತಿ ಸಹಕಾರದೊಂದಿಗೆ ಎ.6ರಂದು ನಡೆಯಲಿರುವ 108 ತೆಂಗಿನಕಾಯಿ ಗಣಪತಿ ಹೋಮ, ಸಾಮೂಹಿಕ ಶನೈಶ್ಚರ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ವೃತ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾ.20 ರಂದು ದೇವಸ್ಥಾನ ಬಿಡುಗಡೆ ಮಾಡಲಾಯಿತು.

ಆಡಳಿತ ಮೋಕ್ತೆಸರ ಕೆ.ರಾಧಾಕೃಷ್ಣ ಹೊಳ್ಳ, ಧಾ.ಕಾ.ಅ. ಸಮಿತಿ ಅಧ್ಯಕ್ಷ ಗಣೇಶ್ ಭಟ್ ಕುತ್ರೋಟ್ಟು ಕಾರ್ಯದರ್ಶಿ ಪದ್ಮನಾಭ ಗೌಡ ಬರ್ಕೆ, ಕೋಶಾಧಿಕಾರಿ ವಿವೇಕಾನಂದ ಗೌಡ ಭೋಜಾರ, ಸದಸ್ಯರುಗಳಾದ ನಾರಾಯಣ ನಾಯ್ಕ, ಸಂತೋಷ ಹೊಳ್ಳ, ಮಂಜುಳಾ ದೇವಾಡಿಗ, ಮಮತಾ ಶೆಟ್ಟಿ, ಆನಂದ ಗೌಡ ಮೊದಲದವರು ಉಪಸ್ಥಿತರಿದ್ದರು.

Exit mobile version