Site icon Suddi Belthangady

ಎ.8-17: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ, ಕಾರ್ಯಾಲಯ ಉದ್ಘಾಟನೆ

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.8 ರಿಂದ 17ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾಮಹೋತ್ಸವ ಜರಗಲಿದ್ದು, ಮಾ.22ರಂದು ಪ್ರಧಾನ ಅರ್ಚಕರಾದ ರಘುರಾಮ್ ಭಟ್ ಮಠ ನೇತೃತ್ವದಲ್ಲಿ ಚಪ್ಪರ ಮೂಹೂರ್ತ ನೆರವೇರಿಸಿದರು.

ಕಾರ್ಯಲಯ ಉದ್ಘಾಟನೆಯನ್ನು ಧಾರ್ಮಿಕ ಪರಿಷತ್ ಸದಸ್ಯ ಕೆ.ಎಸ್ ಯೋಗಿಶ್ ಕುಮಾರ್ ನಡಕರ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸೀತಾ ಶೆಟ್ಟಿ ಹಲ್ಲಂದೋಡಿ, ದೇವಸ್ಥಾನದ ಸಹಾಯಕ ಅರ್ಚಕರು ವಿಷ್ಣು ಪ್ರಸಾದ್ ಭಟ್, ಸಮಿತಿಯ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಪಡಂಗಡಿ, ಉಪಾಧ್ಯಕ್ಷ ದಾಮೋದರ ಕುಂದರ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ,ಕೋಶಾಧಿಕಾರಿ ವಸಂತ ಗೌಡ, ಆರ್ಥಿಕ ಸಮಿತಿಯ ಸಂಚಾಲಕರಾದ ಗಂಗಾಧರ ಭಟ್ ಕೆವುಡೇಲು, ಸೇವಾ ಸಮಿತಿ ಸದಸ್ಯ ಮತ್ತು
ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪ್ರವೀಣ್ ಕುಮಾರ್ ಚೈನ್ ಪಾಡ್ಯಾರು ಬಿಡು, ಕಾರ್ಯಾಲಯ ಸಮಿತಿಯ ಸಂಚಾಲಕ ಸುದೀಪ್ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಆನಂದ್ ಶೆಟ್ಟಿ ವಾತ್ಸಲ್ಯ, ಚಪ್ಪರ ಸಮಿತಿಯ ಸಂಚಾಲಕರಾದ ಉಮೇಶ್ ಪೂಜಾರಿ ಪಡಂಗಡಿ, ನೇಮೋತ್ಸವ ಸಮಿತಿ ಸಂಚಾಲಕ ನಾರಾಯಣ ಮೂಲ್ಯ ಓಡೀಲು, ಉಗ್ರಾಣ ಸಮಿತಿ ಸಂಚಾಲಕ ಅಶ್ವಿತ್ ಓಡೀಲು, ಸೇವಾ ಸಮಿತಿ ಸದಸ್ಯರಾದ ಶಾಂತ ಜೆ.ಬಂಗೇರ, ಅಶ್ವಿನಿ ನಾಯಕ್, ರಾಜ್ ಪ್ರಕಾಶ್ ಶೆಟ್ಟಿ, ವಿಜಯ ಸಾಲ್ಯಾನ್ ಪಣಕಜೆ, ಆಮಂತ್ರಣ ಪತ್ರಿಕೆ ಸಮಿತಿ ಸಂಚಾಲಕ ಸತೀಶ್ ಬಂಗೇರ, ಸಭಾ ವೇದಿಕೆ ಸಂಚಾಲಕ ಸುಕೇಶ್ ಪೂಜಾರಿ ಓಡೀಲು, ಅಲಂಕಾರ ಸಹ ಸಂಚಾಲಕ ಯೋಗೀಶ್ ಶೆಟ್ಟಿ ಅನಿಲ, ತೋರಣ ಸಮಿತಿಯ ಸಂಚಾಲಕರದ ಮನಮೋಹನ್ ನಾಯಕ್, ಮಾಧ್ಯಮ ಸಮಿತಿ ಸಂಚಾಲಕರದ ಉಮೇಶ್ (ಮನು ಮದ್ದಡ್ಕ), ಹಿರಿಯರಾದ ಗೋವಿಂದ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯಾ ಕಾರ್ಯಕ್ರಮ ನಿರ್ವಹಿಸಿದರು.

Exit mobile version