Site icon Suddi Belthangady

ಪೇರಲ್ತಪಲಿಕೆ: ಬಟ್ಲಡ್ಕ ನೂತನ ಮದ್ರಸ ಕಟ್ಟಡ ಉದ್ಘಾಟನೆ ಹಾಗೂ ಏಕದಿನ ಮತಪ್ರವಚನ ಕಾರ್ಯಕ್ರಮ

ಬೆಳ್ತಂಗಡಿ: ಬಟ್ಲಡ್ಕ ಜುಮಾ ಮಸೀದ್ ಇದರ ಅಧೀನದಲ್ಲಿರುವ ಪೇರಲ್ತಪಲಿಕೆ ನವೀಕೃತ ಮದ್ರಸ ನೂತನ ಕಟ್ಟಡ ಉದ್ಘಾಟನೆ ಹಾಗೂ ಏಕದಿನ ಮತಪ್ರವಚನ ಕಾರ್ಯಕ್ರಮ ಮಾ.9ರಂದು ಮದರಸ ವಠಾರ, ಪೇರಲ್ತಪಲಿಕೆ ನಡೆಯಿತು.

ನೂತನ ಮದ್ರಸ ಕಟ್ಟಡ ಉದ್ಘಾಟನೆಯನ್ನು ಅಲ್ ಹಾಜಿ ಅಸ್ಸಯ್ಯಿದ್ ಅಬ್ದುಲ್ ರಹಿಮಾನ್ ಸಾದಾತ್ ತಂಜಳ್ ಬಾಅಲವಿ ಉಪಖಾಝಿ ಬೆಳ್ತಂಗಡಿ ಸಂಯುಕ್ತ ಜಮಾಲಿತ್, ಅಸರ್ ನಮಾಝಿನ ಬಳಿಕ ಬಟ್ಲಡ್ಕ ಮಖಾಂ ಝಿಯಾರತ್ ನೇತೃತ್ವ ವಹಿಸಿಕೊಂಡವರು ಮಹಮ್ಮದ್ ಆಸಿಫ್ ಸಖಾಫಿ ಮಗ್ರಿಬ್ ನಮಾಝಿನ ಬಳಿಕ ನೂತನ ಮದ್ರಸ ಕಟ್ಟಡದಲ್ಲಿ ಬದ್ರ್ ಮೌಲಿದ್ ಪಾರಾಯಣದ ನೇತೃತ್ವವನ್ನು ಮಹಮ್ಮದ್ ಆಸಿಫ್ ಸಖಾಫಿ, ಅಧ್ಯಕ್ಷತೆಯನ್ನು ಬಟ್ಲಡ್ಕ ಜುಮಾ ಮಸೀದ್‌ಯ ಅಧ್ಯಕ್ಷ ಜನಾಬ್ ಅಬೂಬಕ್ಕರ್ ಬಡ್ಲಡ್ಕ, ಉದ್ಘಾಟನೆಯನ್ನು ಮಹಮ್ಮದ್ ಆಸಿಫ್ ಸಖಾಫಿ, ಮತಪ್ರಭಾಷಣವನ್ನು ಮಹಮ್ಮದ್ ಆಶ್ರಫ್ ಸಖಾಫಿ ಮಾಡಾವು ಮಾಡಿದ್ದರು.

ಆಲ್ ಹಾಜಿ ಅಸ್ಸಯ್ಯಿದ್ ಅಬ್ದುಲ್ ರಹಿಮಾನ್ ಸಾದಾತ್ ತಂಙಳ್‌ದುವಾ ಆಶೀರ್ವಚನವನ್ನು ಮಾಡಿದರು.ಅಬೂಸ್ಟಾಲಿಹ್ ಸಖಾಫಿ ಬಟ್ಲಡ್ಕ ಪ್ರಸ್ತಾವಿಕ ಮಾತನ್ನು ಹಾಡಿದರು.

ವೇದಿಕೆಯಲ್ಲಿ ಹಸನ್ ಮುಸ್ಲಿಯಾರ್ ಸುರಿಬೈಲ್, ಜನಾಬ್.ಜಿ.ಎಮ್.ಕುಂಞ ಪ್ರದಾನ ಕಾರ್ಯದರ್ಶಿ, ಕರ್ನಾಟಕ ಮುಸ್ಮಿಂ ಜಮಾಲಿತ್ ಪರಳಿಕಟ್ಟೆ ಸರ್ಕಲ್, ಜನಾಬ್ ಹಬೀಬುರ್ರಹ್ಮಾನ್ ಉಪಾಧ್ಯಕ್ಷರು, ಜುಮಾ ಮಸೀದ್ ಬಟ್ಲಡ್ಕ, ಜನಾಬ್ ಇಸುಬು ಕೋಶಾಧಿಕಾರಿ ಜುಮಾ ಮಸೀದ್ ಬಟ್ಲಡ್ಕ, ಜನಾಬ್ ವಿ.ಮುಹಮ್ಮದ್ ಬಂದಾರ್ ಪ್ರಧಾನ ಕಾರ್ಯದರ್ಶಿ,ಜುಮಾ ಮಸೀದ್ ಬಟ್ಲಡ್ಕ,ಜನಾಬ್.ಅಬ್ಬಾಸ್ ಬಟ್ಲಡ್ಕ ಅಧ್ಯಕ್ಷರು ಕರ್ನಾಟಕ ಮುಸ್ಸಿಂ ಜಮಾಲಿತ್ ಬಟ್ಲಡ್ಕ ಯುನಿಟ್, ಜನಾಬ್ ರಫೀಕ್ ಪಿ.ಅಧ್ಯಕ್ಷರು, ಬಟ್ಲಡ್ಕ ಯುನಿಟ್, ಮುಹಮ್ಮದ್ ಮನ್ಡೂರ್ ಮುಈನ್ ಅದನಿ ಅಧ್ಯಕ್ಷರು ಬಟ್ಲಡ್ಕ ಯುನಿಟ್, ಜನಾಬ್.ಆದಂ, ಜನಾಬ್ ನವಾರ ಜೆ.ಎಮ್, ಜನಾಬ್ ಪಿ.ಬಿ ಸಿಝಾಮ್ ಉಪ್ಪಿನಂಗಡಿ, ಜನಾಬ್ ಅಬೂಬಕ್ಕರ್, ಮಾ.ಸಾದಿಕ್ ಉಸಸ್ಥಿತರಿದ್ದರು.

ಅಯ್ಯೂಬ್ ಮುಸ್ಲಿಯಾರ್ ನೆಲ್ಯಾಡಿ ಸ್ವಾಗತಿಸಿ, ಅಬ್ದುಲ್ ರಹಿಮಾನ್ ಬಟ್ಲಡ್ಕ ಧನ್ಯವಾದವಿತ್ತರು.

Exit mobile version