Site icon Suddi Belthangady

ಮಡಂತ್ಯಾರು: ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ- ಸಾರ್ವಜನಿಕರಿಂದ ಆಕ್ರೋಶ

ಮಡಂತ್ಯಾರು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ.ಕಾಮಗಾರಿಯು ಸಂಪೂರ್ಣ ಕಳಪೆಯಾಗಿದ್ದು ಎಲ್ಲಾ ಕಡೆಗಳಲ್ಲಿ ಕಾಂಕ್ರಿಟ್ ಚರಂಡಿ ರಚಿಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ಕಾಮಗಾರಿ ಎಂದು ಈ ಫೋಟೋದಿಂದ ಉತ್ತರ ದೊರೆತಿದೆ.

ಕಾಂಕ್ರಿಟ್ ಹಾಕಿದ್ದಾರೆ, ಕ್ಯೂರಿಂಗ್ ಗೆ ನೀರೇ ಬಳಸುವುದಿಲ್ಲ ಇದು ಹೊಸ ಪ್ರಯೋಗ, ಕಳೆದ ಬಾರಿ ಕಲ್ಮಂಜ ನಿಡಿಗಲ್ ನಲ್ಲಿ ಬಹು ದೊಡ್ಡ ಸೇತುವೆ ನಿರ್ಮಾಣವಾಗಿತ್ತು.ಅದು ಕೆಲವೇ ದಿನದಲ್ಲಿ ಸೇತುವೆ ಮಧ್ಯದಲ್ಲಿಯೇ ಬಿರುಕು ಬಿಟ್ಟಿದ್ದು ಕೂಡ ಗಮನಿಸಬಹುದು.

ಇದು ಮಡಂತ್ಯಾರ್ ನ ಸಹಕಾರಿ ಸಂಘದ ಎದುರುಗಡೆಯ ರಸ್ತೆ, ಜನರು ಎಚ್ಛೆತ್ತುಕೊಳ್ಳದಿದ್ದರೆ ಮರಣ ಬಾವಿ ಅಲ್ಲಲ್ಲಿ ತೆರೆದುಕೊಳ್ಳಬಹುದು ಅಂತ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿ ಪತ್ರಿಕೆ ಮತ್ತು ಚಾನೆಲ್ ಇದರ ಸವಿವರ ವರದಿ ಪ್ರಕಟಿಸಿತ್ತು.ಈ ರಸ್ತೆ ಬಗ್ಗೆಯೇ ಕಳೆದ ವಾರ ಕಳಪೆ ಕಾಮಗಾರಿ ಎಂದು ವರದಿ ಪ್ರಕಟಿಸಲಾಗಿತ್ತು.

Exit mobile version