Site icon Suddi Belthangady

ಹಿರಿಯ ಪತ್ರಕರ್ತ ಪ್ರೊ.ನಾ’ವುಜಿರೆ’ಯವರಿಗೆ ಪತ್ರಕರ್ತ ಸಂಘದಿಂದ ನುಡಿ ನಮನ

ಬೆಳ್ತಂಗಡಿ: ತಾಲೂಕಿನ ಹಿರಿಯ ಪತ್ರಕರ್ತ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ನಾ ‘ಉಜಿರೆ’ ಎಂದೇ ಹೆಸರು ಪಡೆದ ಪ್ರೊ.ನಾಗರಾಜ ಪೂವಣಿಯವರಿಗೆ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಮತ್ತು ನುಡಿ ನಮನ ಕಾರ್ಯಕ್ರಮವು ಸಂಘದ ಕಚೇರಿಯಲ್ಲಿ ಮಾ.19ರಂದು ನಡೆಯಿತು.

ಸಂಘದ ಮಾಜಿ ಅಧ್ಯಕ್ಷ , ಹಿರಿಯ ಸದಸ್ಯ ಆರ್.ಎನ್.ಪೂವಣಿ ನಾ ‘ವುಜಿರೆ’ಯವರ ಒಡನಾಟದ ದಿನಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.ಸಂಘದ ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ, ಉಪಾಧ್ಯಕ್ಷ ಶಿಬಿ ಧರ್ಮಸ್ಥಳ, ಸಂಘದ ಹಿರಿಯ ಸದಸ್ಯರಾದ ಶ್ರೀನಿವಾಸ ತಂತ್ರಿ, ಬಿ.ಎಸ್. ಕುಲಾಲ್ ನುಡಿನಮನ ಸಲ್ಲಿಸಿ ಒಡನಾಟದ ದಿನಗಳನ್ನು ಮೆಲುಕು ಹಾಕಿದರು.

ಸಂಘದ ಸದಸ್ಯರು ಪುಷ್ಪಾರ್ಚನೆಗೈದು ಮೌನ ನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಜತೆ ಕಾರ್ಯದರ್ಶಿ ಮನೋಹರ್ ಬಳೆಂಜ, ಸದಸ್ಯರುಗಳಾದ ಅಚುಶ್ರೀ ಬಾಂಗೇರು, ಹೃಷಿಕೇಶ್ ಧರ್ಮಸ್ಥಳ, ಜಾರಪ್ಪ ಪೂಜಾರಿ ಬೆಳಾಲು, ಪ್ರಸಾದ್ ಶೆಟ್ಟಿ ಏನಿಂಜೆ, ತುಕರಾಮ್ ಬಿ. ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಸ್ವಾಗತಿಸಿದರು.ಕಾರ್ಯದರ್ಶಿ ಗಣೇಶ್ ಶಿರ್ಲಾಲು ನಿರೂಪಿಸಿ ವಂದಿಸಿದರು.

Exit mobile version