Site icon Suddi Belthangady

ಗೃಹರಕ್ಷಕ ದಳದ ವಾರದ ಕವಾಯತಿಗೆ ಮುರಲಿ ಮೋಹನ ಚೂಂತಾರು ಭೇಟಿ

ಬೆಳ್ತಂಗಡಿ: ಮಾ.19ರಂದು ಬೆಳ್ತಂಗಡಿ ಗೃಹರಕ್ಷಕ ದಳದ ಘಟಕದ ವಾರದ ಕವಾಯತಿಗೆ ದ.ಕ.ಜಿಲ್ಲಾ ಸಮಾದೇಷ್ಟರಾದ ಡಾ.ಮುರಲಿ ಮೋಹನ್ ಚೂಂತಾರು ಅವರು ಆಗಮಿಸಿ ಚುನಾವಣಾ ಬಗ್ಗೆ ಸಲಹೆ ಸೂಚನೆ ನೀಡಿದರು.

ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಕಲ ಸಹಕಾರ ನೀಡುವಂತೆ ಗೃಹರಕ್ಷಕರಿಗೆ ಮನವಿ ಮಾಡಿದರು.

ಘಟಕಾಧಿಕಾರಿ ಜಯಾನಂದ, ಸೆಕ್ಷನ್ ಲೀಡರ್ ಚಾಕೋ ಕೆ.ಜೆ ಹಾಗೂ ಒಟ್ಟು 34 ಗೃಹರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version