Site icon Suddi Belthangady

ಅರಿಕೆಗುಡ್ಡ ಕ್ಷೇತ್ರದಲ್ಲಿ ದೈವಗಳಿಗೆ ಹಾಗೂ ನಾಗದೇವರಿಗೆ ತಂಬಿಲ ಸೇವೆ

ಕೊಕ್ಕಡ: ಅರಿಕೆಗುಡ್ಡೆ ಕ್ಷೇತ್ರದಲ್ಲಿ ಬ್ರಹ್ಮಕಲಶದ ನಂತರ ಪ್ರಥಮ ಸಂಕ್ರಾಂತಿ ಪ್ರಯುಕ್ತ ದೈವಗಳಿಗೆ ಹಾಗೂ ನಾಗ ದೇವರಿಗೆ ತಂಬಿಲ ಸೇವೆ ಮಾ.14ರಂದು ದೇವಳದ ಅರ್ಚಕ ಉಲ್ಲಾಸ್ ಭಟ್ ನೇತೃತ್ವದಲ್ಲಿ ನಡೆಯಿತು.

ಇಂದು (ಮಾ.15ರಂದು) ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಶುಕ್ರವಾರದ ವಿಶೇಷಪೂಜೆ, ಅಗಳುಪಾಯಸ ಸೇವೆ ನಡೆಯಲಿದ್ದು ಎಲ್ಲಾ ಭಗವತ್ಭಕ್ತರು ಸೇವೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ಆಡಳಿತ ಸಮಿತಿ ತಿಳಿಸಿದ್ದಾರೆ.

ಅಲ್ಲದೆ ಎಲ್ಲಾ ದಿನಗಳಲ್ಲಿ ದೇವರಿಗೆ ಅಭಿಷೇಕಕ್ಕೆ ಹಾಲು, ತುಪ್ಪ, ಜೇನು, ಸಿಯಾಳ ಕೊಡುವವರು ಬೆಳಗ್ಗೆ 11.15 ಗಂಟೆಯ ಒಳಗೆ ದೇವಸ್ಥಾನಕ್ಕೆ ತಲುಪಿಸಿ ಸಹಕರಿಸಬೇಕಾಗಿ ವಿನಂತಿಸಿದ್ದಾರೆ.

Exit mobile version