Site icon Suddi Belthangady

ಧರ್ಮಸ್ಥಳ: ಕೊಳೆನ್ಜಿಲೋಡಿ ತಿರುವಿನಿಂದ ನೇತ್ರಾವತಿ ನದಿಯವರೆಗೆ ಸ್ವಚ್ಛತಾ ಕಾರ್ಯ

ಧರ್ಮಸ್ಥಳ: ಕೊಳೆನ್ಜಿಲೋಡಿ ತಿರುವಿನಿಂದ ನೇತ್ರಾವತಿ ನದಿಯವರೆಗೆ ಸ್ವಚ್ಛತಾ ಕಾರ್ಯವನ್ನು ಮಾ.12ರಂದು ನಡೆಸಲಾಯಿತು.

10 ಜನ ಸ್ವಯಂಸೇವಕರು ಜೊತೆ ಸೇರಿಕೊಂಡು ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತರು ರಸ್ತೆಯ ಬದಿಯಲ್ಲಿನ ಕಸಗಳನ್ನು ಸ್ವಚ್ಛತೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯ್ಸ್ ಮತ್ತು ಮೋಹನ್ ಹಾಗೂ ಜೈವಂತ್ ಪಟಗಾರ್ ರವರು ಸ್ವತಃ ಸೇರಿಕೊಂಡು ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿಯದರು.

ಕಲ್ಮಂಜ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಗೌಡ ಪಂಚಾಯತ್ ಅಧ್ಯಕ್ಷರ ಮುಖೇನ ಕಸವನ್ನು ತುಂಬಲು ಪ್ಲಾಸ್ಟಿಕ್ ಚೀಲವನ್ನು ಹಾಗೂ ಊಟದ ಉಪಚಾರವನ್ನು ಮಾಡಿದರು.

Exit mobile version