Site icon Suddi Belthangady

ಉಜಿರೆ: ಗಾಂಧಿನಗರ-ಕಾಶಿಬೆಟ್ಟು ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರಿಂದ ರಕ್ಷಿತ್ ಶಿವರಾಂ ಗೆ ಮನವಿ

ಉಜಿರೆ: ಗಾಂಧಿನಗರ-ಕಾಶಿಬೆಟ್ಟು ರಸ್ತೆಯು ತೀವ್ರ ಹಾಳಾಗಿದ್ದು ಮಾ.10ರಂದು ಗಾಂಧಿನಗರಕ್ಕೆ ರಕ್ಷಿತ್ ಶಿವರಾಂ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಗಾಂಧಿನಗರ ಪರಿಸರದ ಸಾರ್ವಜನಿಕರು ಸೇರಿ ರಸ್ತೆ ಹಾಳಾಗಿರುವ ಬಗ್ಗೆ ವಿವರಿಸಿ ಹೇಳಿ ಈ ರಸ್ತೆಯಲ್ಲಿ ದಿನಾಲೂ ಕೆಲಸಕ್ಕೆ ಹೋಗುವವರು ಶಾಲಾ ಕಾಲೇಜು ಹೋಗುವ ಮಕ್ಕಳಿಗೆ ಹಾಗೂ ಪೇಟೆಗೆ ಹೋಗುವ ಪ್ರಯಾಣಿಕರಿಗೂ ಯಾವುದೇ ಆಟೋ ಚಾಲಕರು ಬಾಡಿಗೆ ಬರಲು ಒಪ್ಪುವುದಿಲ್ಲ ಅದ್ದರಿಂದ ಶಾಲಾ ಮಕ್ಕಳು ನಡೆದುಕೊಂಡು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದಷ್ಟೂ ಬೇಗ ಈ ರಸ್ತೆಯನ್ನು ಅಭಿವೃದ್ಧಿ ಮಾಡಲು ಊರವರ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗ್ರಾಮೀಣ ಅಧ್ಯಕ್ಷ ಕೆ.ಎಮ್.ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ತಾಲೂಕು ಬ್ಲಾಕ್ ಕಾಂಗ್ರೆಸ್ ಉಜಿರೆ ಗ್ರಾಮ ಸಮಿತಿಯ ಅಧ್ಯಕ್ಷ ನಿವಾಸ್.ಕೆ, ಟಿ.ಜೆ ಮೊರಾಸ್, ಬಿ.ಎಚ್ ಇಬ್ರಾಹಿಂ, ಖಲೀಪಾ ಜುಮ್ಮಾ ಮಸೀದಿಯ ಅಧ್ಯಕ್ಷ ಲತೀಫ್ ಹಾಗೂ ಸರ್ವ ಸದಸ್ಯರು ಮತ್ತು ಊರಿನ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version