Site icon Suddi Belthangady

ತೋಟತ್ತಾಡಿ: ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ

ತೋಟತ್ತಾಡಿ: ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ತಾಲೂಕು ಸಂಘದ ಕಾರ್ಯದರ್ಶಿ ಗಣೇಶ್ ಗೌಡ ಕಡಿರುದ್ಯಾವರ ಅವರ ಅಧ್ಯಕ್ಷತೆಯಲ್ಲಿ ಸಂಘದ ನಿವೇಶನ ಕೃಷ್ಣ ನಗರದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾದ ಗೋಪಾಲಕೃಷ್ಣ ಗೌಡ ಮಡೀರು ಮುಂದಿನ 2 ವರ್ಷಗಳಲ್ಲಿ ಸಂಘ ಮುನ್ನಡೆಸುವಲ್ಲಿ ಗ್ರಾಮದ ಪ್ರತಿ ಮನೆಯವರ ಸಹಕಾರ ನೀಡುವಂತೆ ಕೋರಿ ಸಂಘದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ತಾಲೂಕು ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಕೊಯ್ಯೂರು, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಗೋಪಾಲಕೃಷ್ಣ ಜಿ.ಕೆ ಉಜಿರೆ ಮತ್ತು ಸುರೇಶ್ ಕೌಡಂಗೆ ತಾಲೂಕು ಸಂಘದ ನಿಕಟಪೂರ್ವ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ನಿಕಟಪೂರ್ವ ನಿರ್ದೇಶಕರಾದ ಆನಂದ ಗೌಡ ಉಜಿರೆ, ಕೃಷ್ಣಪ್ಪ ಗೌಡ ಅಗರಿ, ರಾಮಣ್ಣ ಗೌಡ ಏಡಿಯಾರು, ಕೃಷ್ಣ್ನ ಗೌಡ ಜಾಕೇಡಿ, ನೀಲಯ್ಯ ಗೌಡ ಮಡೀರು, ಓಬಯ್ಯ ಗೌಡ ಬಾಯಿತ್ಯಾರು, ಲಕ್ಷ್ಮಣ ಗೌಡ ಕಲ್ಲರಿಗೆ ಮೊದಲಾದವರು ಉಪಸ್ಥಿತರಿದ್ದರು.

Exit mobile version