Site icon Suddi Belthangady

ಶಿಶಿಲ: ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದ ವಾರ್ಷಿಕೋತ್ಸವ- ನಿವೃತ್ತ ಕೆ.ಜಯಕೀರ್ತಿ ಜೈನ್ ರವರಿಗೆ ಸನ್ಮಾನ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದ ವಾರ್ಷಿಕೋತ್ಸವ ಸಂದರ್ಭದಲ್ಲಿ ಜಿನಮಂದಿರದ ಆಡಳಿತ ಮಂಡಳಿಯ ಸಂಚಾಲಕರಾದ ಸರ್ಕಾರಿ ಅಧಿಕಾರಿಯಾಗಿ ನಿವೃತ್ತಿಗೊಂಡ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಕೆ.ಜಯಕೀರ್ತಿ ಜೈನ್ ಅವರನ್ನು ಸ್ವಸ್ತೀ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಜೈನ ಮಠ ಕಾರ್ಕಳ ಇವರು ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ವಿಜಯಕುಮಾರ್, ಚಿತ್ತರಂಜನ್ ಶಿರ್ತಾಡಿ, ಜಿನರಾಜ ಪೂವಣಿ, ಯುವರಾಜ ಪೂವಣಿ, ಫಣಿರಾಜ್ ಜೈನ್, ರಾಜೇಂದ್ರ ಕುಮಾರ್, ಸಂತೋಷ್ ಜೈನ್, ವೀರೇಂದ್ರ ಕುಮಾರ್, ಅಜಿತ್ ಕುಮಾರ್, ನಾಗಕನ್ನಿಕ, ವತ್ಸಲಾ ಜ್ಯೋತಿರಾಜ್, ಶಕುಂತಲಾ ಜೆ. ಜೈನ್, ಪಿ ಅತಿಶಯ ಜೈನ್ , ವಿಮಲಾ ವಿಜಯ್ ಕುಮಾರ್ ಮುಂತಾದವರಿದ್ದರು.

Exit mobile version