ನೇತ್ರಾವತಿ ಸೇತುವೆಯ ಕೆಳಗೆ ಅಪರಿಚಿತ ಶವ ಪತ್ತೆ

ಧರ್ಮಸ್ಥಳ: ಧರ್ಮಸ್ಥಳ ನೇತ್ರಾವತಿ ನದಿಯ ಕೆಳಗೆ ಅಪರಿಚಿತ ಶವ ಮಾ.10ರಂದು ಪತ್ತೆಯಾಗಿದೆ. ಶೌರ್ಯ ತುರ್ತು ಸ್ಪಂದನ ತಂಡದ ಸ್ವಯಂಸೇವಕರು ತಕ್ಷಣವೇ ಬಂದು ಶವವನ್ನು ನೀರಿನಿಂದ ಮೇಲಕ್ಕೆ ಎತ್ತಿದರು. ಧರ್ಮಸ್ಥಳ ಠಾಣೆಯ ಠಾಣಾಧಿಕಾರಿ ಅನಿಲ್, ಆರಕ್ಷಕರಾದ ಸಾಮುವೆಲ್, ಧರ್ಮಪಾಲ ಉಪಸ್ಥಿತಿ ಯಲ್ಲಿ ತುರ್ತು ವಾಹನದಲ್ಲಿ ಮಂಗಳೂರು ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ .