Site icon Suddi Belthangady

ಮಾ.10: ಗರ್ಡಾಡಿ ಕೆಲ್ಲಾಡಿ ನಾಗಬ್ರಹ್ಮ ಪಂಚ ದೈವೀಕ ಕ್ಷೇತ್ರದಲ್ಲಿ ಆಶ್ಲೇಷಾ ಬಲಿ ಹಾಗೂ ನೇಮೋತ್ಸವ

ಗರ್ಡಾಡಿ: ಕೆಲ್ಲಾಡಿ ನಾಗಬ್ರಹ್ಮ ಪಂಚ ದೈವೀಕ ಕ್ಷೇತ್ರದಲ್ಲಿ 4ನೇ ವರ್ಷದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಆಶ್ಲೇಷಾ ಬಲಿ, ರಕ್ತೇಶ್ವರಿ-ಮೈಸಂದಾಯ, ಕಲ್ಲುರ್ಟಿ-ಪಂಜುರ್ಲಿ ಗುಳಿಗ ದೈವಗಳಿಗೆ ಸಿರಿ ಸಿಂಗಾರದ ನೇಮೋತ್ಸವ ಮಾ.10ರಂದು ಜರಗಲಿರುವುದು.

ನವೀನ್ ಚಂದ್ ಬಲ್ಲಾಳ್ ಹಚ್ಚಾಡಿ, ಪ್ರಧಾನ ಅರ್ಚಕ ಡಿ.ಉದಯ ಮಂಜಿತ್ತಾಯ, ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಕಾರ್ಯದರ್ಶಿ ಲೋಹಿತ್ ಕೊಟ್ರೋಡಿ, ಅಧ್ಯಕ್ಷ ಜಗನ್ನಾಥ ಶೆಟ್ಟಿ ಉದಲೋಡಿ, ಶ್ರೀ ನಾಗಬ್ರಹ್ಮ ಸೇವಾ ಸಮಿತಿ ಕೆಲ್ಲಾಡಿ, ಶ್ರೀ ನಾಗಬ್ರಹ್ಮ ಮಹಿಳಾ ಸೇವಾ ಸಮಿತಿ ಕೆಲ್ಲಾಡಿ ಹಾಗೂ ಊರವರು ಭಾಗವಹಿಸಲಿರುವರು.

Exit mobile version