Site icon Suddi Belthangady

ಕೊಲ್ಲಿ 26ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳದ ಉದ್ಘಾಟನೆ

ಬಂಗಾಡಿ: ಕೊಲ್ಲಿ 26ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ಯುವ ನಾಯಕ ರಂಜನ್ ಜಿ.ಗೌಡರವರ ಸಾರಥ್ಯದಲ್ಲಿ ಮಾ.9ರಂದು ಬಂಗಾಡಿ ಕೊಲ್ಲಿಯ ನೇತ್ರಾವತಿ ನದಿ ಕಿನಾರೆಯ ವಿಶಾಲ ಪ್ರದೇಶದ ಕಂಬಳ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಂಬಳವನ್ನು ಬಂಗಾಡಿ ಅರಮನೆಯ ಯಶೋಧರ ಬಳ್ಳಾಲ್ ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮವನ್ನು ಆರ್.ಜೆ.ಎಂ ಕಾಜೂರಿನ ಬದ್ರುದ್ದೀನ್ ಎಚ್, ಡೆಂಟಲ್ ಸರ್ಜನ್ ಡಾ.ಎಮ್.ಎಮ್ ದಯಾಕರ್, ಮುಕುಂದ ಸುವರ್ಣ, ಬಂಗಾಡಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ.ಗೌಡ, ಎ.ಪಿ.ಎಂ.ಸಿ.ಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಪಶು ವೈದ್ಯಾಧಿಕಾರಿ ರವಿಕುಮಾರ್, ಕಾಲಭೈರವೇಶ್ವರ ಸೊಸೈಟಿ ಕಾರ್ಯನಿರ್ವಾಹಣಾಧಿಕಾರಿ ದಿನೇಶ್ ಕಲ್ಲಾಜೆ, ಕಡಿರುದ್ಯಾವರದ ಕೃಷ್ಣ ಗೌಡ ುಪಸ್ಥಿತರಿದ್ದರು.

ಕಾರ್ಯದರ್ಶಿಗಳಾದ ಮಧುಕರ ಸುವರ್ಣ, ಉಸ್ಮಾನ್ ಬೆದ್ರಬೆಟ್ಟು, ಆನಂದ ಗೌಡ, ಕಿಸೋರ್ ವಳಂಬ್ರ ಮತ್ತು ಸ್ವಾಗತ ಸಮಿತಿ ಸದಸ್ಯರು ಉಪಸ್ತಿತರಿದ್ದರು.

Exit mobile version