Site icon Suddi Belthangady

ಧರ್ಮಸ್ಥಳ: ಶ್ರದ್ಧಾ ಕೇಂದ್ರಗಳಲ್ಲಿ ‘ದೇವವೃಕ್ಷ’ ನೆಡುವ ಅಭಿಯಾನಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

ಧರ್ಮಸ್ಥಳ: ನದಿ, ಗಿಡ, ಬೆಟ್ಟ, ಗುಡ್ಡ ಹೀಗೆ ಪ್ರಕೃತಿಯಲ್ಲೇ ದೇವರ ಸ್ವರೂಪ ಕಂಡು ಆರಾಧಿಸುವ ಪರಂಪರೆ ಭಾರತೀಯರದ್ದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಮಾ.08ರಂದು ಧರ್ಮಸ್ಥಳದಲ್ಲಿ ಉದ್ಯಾನದಲ್ಲಿ ರುದ್ರಾಕ್ಷಿ ಗಿಡವನ್ನು ನೆಟ್ಟು ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮೂಲಕ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಅರಳಿ, ರುದ್ರಾಕ್ಷಿ, ಪಾರಿಜಾತ, ಬಿಲ್ವಪತ್ರೆ, ಶಮಿ ಮೊದಲಾದ ದೇವವೃಕ್ಷಗಳ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಜನಸೇವಾ ಟ್ರಸ್ಟ್ ನ ಯೋಜನೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.ಎಲ್ಲರೂ ಆಸಕ್ತಿಯಿಂದ ಅಭಿಯಾನಕ್ಕೆ ಪ್ರೋತ್ಸಾಹಿಸಿ ಸಹಕರಿಸಬೇಕೆಂದು ಸಲಹೆ ನೀಡಿದ ಅವರು ತನ್ಮೂಲಕ ಪ್ರಕೃತಿ-ಪರಿಸರ ಸಂರಕ್ಷಣೆ ಮಾಡಿದಂತೆಯೂ ಆಗುತ್ತದೆ ಎಂದು ಹೇಳಿದರು.

ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರು, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ಧನಕೀರ್ತಿ ಆರಿಗಾ, ಸಂದೀಪ್ ರೈ, ರಾಘವೇಂದ್ರ ರಾಜ್, ಜೀವನ್ ಶೆಟ್ಟಿ ಅಯೋಧ್ಯಾ, ಶರತ್ ಶೆಟ್ಟಿ, ನಿಖಿಲ್ ನಾಯಕ್  ಮತ್ತು ಸಂದೀಪ್ ದೇವ್ ಉಪಶ್ಥಿತರಿದ್ದರು.

Exit mobile version