Site icon Suddi Belthangady

ಕಣಿಯೂರು ಪ್ರಾ.ಆ ಕೇಂದ್ರದಲ್ಲಿ ಕ್ಷಯ ರೋಗ ತಡೆಗಟ್ಟುವ ಮಾಹಿತಿ ಹಾಗೂ ಕಿಟ್ ವಿತರಣೆ

ಪದ್ಮುಂಜ: ಇಲ್ಲಿಯ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಕಾರದ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ವತಿಯಿಂದ ಕ್ಷಯ ರೋಗದ ಲಕ್ಷಣಗಳು ಹಾಗೂ ತಡೆಗಟ್ಟುವ ಬಗ್ಗೆ ಮಾಹಿತಿ ಹಾಗೂ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಮಂಗಳೂರು ಇವರು ಕೊಡಮಾಡಿದ ಪೌಷ್ಟಿಕ ಆಹಾರ ಕಿಟ್ ಗಳನ್ನು ಕ್ಷಯ ರೋಗಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಮನಮೋಹನ್ ಶೆಟ್ಟಿ ಕ್ಷಯ ರೋಗದ ಕುರಿತು ಮಾಹಿತಿ ನೀಡಿದರು.

ವೈದ್ಯಾಧಿಕಾರಿ ಫೈಝಿ ಅಬ್ದುಲ್ಲಾ, ಪ್ರಾಥಮಿಕ ಆರೋಗ್ಯ ಶುರಕ್ಷಾಧಿಕಾರಿಗಳಾದ ಸುನಿತಾ ಹೆಗ್ಡೆ, ಶ್ವೇತ, ಫಾರ್ಮ ಸಿಸ್ಟ್ ಸಾವ್ಯ, ಪ್ರಯೋಗ ಶಾಲಾ ತಂತ್ರಜ್ಞೆ ಯಶೋದ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Exit mobile version