Site icon Suddi Belthangady

ಕೊಕ್ಕಡದ ಕಿಟ್ಟ ಮಲೆಕುಡಿಯರವರಿಗೆ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಹಾಗೂ ಕದಳಿ ಬೀಚ್ ಟೂರಿಸಂ ವತಿಯಿಂದ ಕೊಕ್ಕಡದ ಕಿಟ್ಟ ಮಲೆಕುಡಿಯರವರಿಗೆ ಮಾ.3ರಂದು ಜಾನಪದ ಕಡಲೋತ್ಸವ ಕಾರ್ಯಕ್ರಮದಲ್ಲಿ ಕೊಡಮಾಡುವ ಕರ್ನಾಟಕ ಜಾನಪದ ಪರಿಷತ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇವರು ಕೊಕ್ಕಡ ಗ್ರಾಮದ ಕುರ್ಲೆ ನಿವಾಸಿಯಾಗಿದ್ದು ತನ್ನ 15ನೇ ವಯಸ್ಸಿನಿಂದ ಸುಗ್ಗಿ ಪುರುಷರ ಕೂಟದಲ್ಲಿ ವೇಷ ಧರಿಸಲು ಆರಂಭಿಸಿದ್ದರು.

ಧರ್ಮಸ್ಥಳದ ಪುರುಷರ ಕೂಟದಲ್ಲೂ ಸೇವೆ ಸಲ್ಲಿಸಿದ್ದಾರೆ ಮೊದಲು ಪಾರ್ಪಿಕಲ್ಲು ನಂತರ ಧರ್ಮಸ್ಥಳ ಹಾಗೂ ಪಟ್ರಮೆ ಭಾಗದಲ್ಲಿ ಸುಗ್ಗಿ ಪುರುಷರ ಕೂಟದಲ್ಲಿ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ಮುಂಡೂರುಪಳಿಕೆ ಸುಗ್ಗಿ ಪುರುಷರ ಕೂಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Exit mobile version