Site icon Suddi Belthangady

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ

ಕೊಲ್ಲಿ : ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು(ಮಾ.03) ಬೆಳಗ್ಗೆ ಚಪ್ಪರ ಮುಹೂರ್ತ ನಡೆಸಲಾಯಿತು.

ಚಪ್ಪರ ಮುಹೂರ್ತವನ್ನು ಪ್ರಗತಿಪರ ಕೃಷಿಕ ಎನ್‌.ಕೆ ಫಡಕೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲೋಕೇಶ್ ರಾವ್ ಕುದ್ರೋಳಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ರಾವ್ ಕಕ್ಕಿನೇಜಿ, ಚಪ್ಪರ ಸಮಿತಿಯ ಸಂಚಾಲಕ ಕೇಶವ ಎಮ್. ಕೆ ದಿಡುಪೆ, ಸಹ ಸಂಚಾಲಕರಾದ ಶೀನಪ್ಪ ಗೌಡ ಮಜಲು, ಗೌರವ ಸಲಹೆಗಾರರಾದ ರಾಜು ಜಿ.ಎನ್ ದಿಡುಪೆ, ಮಧುಸೂದನ್ ಮಲ್ಲ, ಬ್ರಹ್ಮಕಲಶೋತ್ಸವ ಸಮಿತಿಯ ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಶೀನಪ್ಪ ಗೌಡ ನೆತ್ರಕುಡಂಗೆ, ವಿನಯಚಂದ್ರ ಸೇನರಬೆಟ್ಟು, ಹಾಗೂ ಎನ್.ಕೆ. ಫಡಕೆ ಮನೆಯವರು ಹಾಗೂ ಚಪ್ಪರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಇದೇ ಮಾರ್ಚ್ 20ರಿಂದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

Exit mobile version