Site icon Suddi Belthangady

ಚಾರ್ಮಾಡಿ ಯುವಕ ಮಂಗಳೂರಿನ ರಸ್ತೆ ಅಪಘಾತದಲ್ಲಿ ನಿಧನ

ಚಾರ್ಮಾಡಿ: ಕಕ್ಕಿಂಜೆ ಸಮೀಪದ ಇನ್ನಾಲಿಲ್ಲಾಹ್ ಜಲಾಲಿಯ್ಯನಗರ ನಿವಾಸಿ ವಹೀದಾ ಅವರ ಮಗ ಸಿನಾನ್ (20) ಇವರು ಮಂಗಳೂರಿನಲ್ಲಿ ಕಾಲೇಜಿನ ಬಿಡುವಿನ ಸಮಯದಲ್ಲಿ ಪುಡ್ ಡೆಲಿವರಿ ಕೆಲಸವನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮಾ.1ರಂದು ಮಂಗಳೂರಿನಲ್ಲಿ ರಾತ್ರಿ ಬಸ್ಸಿನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ.

ಮೃತರು ಮಂಗಳೂರಿನ ಯೇನಪೋಯ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.

ಮೃತರು ತಂದೆ, ತಾಯಿ, ತಮ್ಮ, ತಂಗಿಯನ್ನು ಅಗಲಿದ್ದಾರೆ.

Exit mobile version