Site icon Suddi Belthangady

ಬೆಳ್ತಂಗಡಿ: ವಕೀಲರ ಭವನದಲ್ಲಿ ಯುವ ವಕೀಲರಿಗೆ ಕಾನೂನು ಕಟ್ಟೆ ಕಾರ್ಯಕ್ರಮ

ಬೆಳ್ತಂಗಡಿ ವಕೀಲರ ಸಂಘ ಹಾಗೂ ಯುವ ವಕೀಲರ ವೇದಿಕೆ ವತಿಯಿಂದ ಫೆ.28ರಂದು ವಕೀಲರ ಭವನದಲ್ಲಿ ಯುವ ವಕೀಲರಿಗೆ ‘ಆರ್ಟ್ ಆಫ್ ಕ್ರಾಸ್ ಎಕ್ಸಾಮಿನೇಷನ್ ಇನ್ ಕ್ರಿಮಿನಲ್ ಕೇಸಸ್’ ಕುರಿತು ಕಾನೂನು ಕಟ್ಟೆ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿ ವಕೀಲರ ಸಂಘದ ಹಿರಿಯ ವಕೀಲರಾದ ಜೆ.ಕೆ ಪೌಲ್ ಮತ್ತು ಪ್ರಶಾಂತ್ ಎಂ ಮಾಹಿತಿಯನ್ನು ನೀಡಿ ಯುವ ವಕೀಲರ ಜೊತೆ ಚರ್ಚೆಯನ್ನು ನಡೆಸಿದರು.

ವೇದಿಕೆಯಲ್ಲಿ ಯುವ ವಕೀಲರ ವೇದಿಕೆ ಅಧ್ಯಕ್ಷ ಸಂದೀಪ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್.ಬಿ.ಕೆ, ಜೊತೆ ಕಾರ್ಯದರ್ಶಿ ವಿನಯ ಕುಮಾರ್ ಎಂ, ಯುವ ವಕೀಲರ ವೇದಿಕೆಯ ಕಾರ್ಯದರ್ಶಿ ಜ್ಯೋತ್ಸ್ನ ವೆಲೋನ್ನಾ ಕೊರೆಯ ಉಪಸ್ಥಿತರಿದ್ದರು.

ಅಸ್ಮಾ ಸ್ವಾಗತಿಸಿ, ಜಿತೇಶ್ ಕುಲಾಲ್ ಧನ್ಯವಾದವಿತ್ತರು.

Exit mobile version