Site icon Suddi Belthangady

ಬೆಳ್ತಂಗಡಿ ಬೆಳಕು ಸೇವಾ ಸಂಘದಿಂದ ಧನಸಹಾಯ ಹಸ್ತಾಂತರ

ಬೆಳಕು ಸೇವಾ ಸಂಘ ಬೆಳ್ತಂಗಡಿ ಇದರ ಫೆಬ್ರವರಿ ತಿಂಗಳ ಸೇವಾ ಯೋಜನೆಯ ಧನಸಹಾಯವನ್ನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಫೆ.27ರಂದು ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುವಾಗ ನಡೆದ ಆಕಸ್ಮಿಕ ಅಪಘಾತದಲ್ಲಿ ನಿಧನಳಾದ ಉಜಿರೆ ಗ್ರಾಮದ ಮಾಚಾರು ಬದನಾಜೆಯ ನಿವಾಸಿ ಜಯಶ್ರೀ ಇವರ ಮಗಳಾದ ಕುಮಾರಿ ಅಂಕಿತಾ (ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬದನಾಜೆಯ ವಿದ್ಯಾರ್ಥಿ) ಇವಳ ಮನೆಯವರಿಗೆ ಆರ್ಥಿಕ ಸಹಾಯಾರ್ಥವಾಗಿ ₹10,000/- ದ ಚೆಕ್ಕನ್ನು ಬೆಳಕು ಸೇವಾ ಸಂಘದ ಸದಸ್ಯರೂ, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಯಾ ಬೆಳಾಲು ಇಲ್ಲಿಯ ಮುಖ್ಯಶಿಕ್ಷಕರಾದ ವಿಠಲ.ಎಂ ಇವರ ಮೂಲಕ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್.ಎಂ, ಬೆಳಕು ಸೇವಾ ಸಂಘದ ಸದಸ್ಯರುಗಳಾದ ಬದನಾಜೆ ಪ್ರೌಢ ಶಾಲೆಯ ಮೇಧಾ.ಕೆ, ಸರಕಾರಿ ಉನ್ನತೀಕರಿಸಿದ ಶಾಲೆ ಬದನಾಜೆಯ ಮಮತಾ.ವಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Exit mobile version