Site icon Suddi Belthangady

ಕೊಯ್ಯೂರು: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಕೊಯ್ಯೂರು: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಕೊಯ್ಯೂರು ಇದರ ಮುಂದಿನ 2 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ವಿಜಯ ಕುಮಾರ್ ಎಂ. ಕೊಯ್ಯೂರು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ನವೀನ್ ಗೌಡ ವಾದ್ಯಕೋಡಿ, ಉಪಾಧ್ಯಕ್ಷರಾಗಿ ಮೋಹನದಾಸ್ ಪಾಂಬೇಲು, ಯಶವಂತ ಗೌಡ ಪೂರ್ಯಾಳ, ಕಾರ್ಯದರ್ಶಿ ವಿಶ್ವನಾಥ ಎಂ.ಯು., ಜತೆ ಕಾರ್ಯದರ್ಶಿ ದಿನೇಶ್ ಗೌಡ ಜಾಲ್ನಪು, ಕೋಶಾಧಿಕಾರಿ ಗೋಪಾಲಕೃಷ್ಣ ಗೌಡ ಕಾಲಕುಮೇರು ಅವರನ್ನು ಆರಿಸಲಾಯಿತು.

ಮಹಿಳಾ ವೇದಿಕೆ ಅಧ್ಯಕ್ಷರಾಗಿ ವನಿತಾ ಕಡಮಾಜೆ, ಕಾರ್ಯದರ್ಶಿಯಾಗಿ ದೀಪಿಕಾ ದೇಲೋಡಿ, ಯುವ ವೇದಿಕೆ ಅಧ್ಯಕ್ಷರಾಗಿ ಅಜಿತ್ ಬಜಿಲ, ಕಾರ್ಯದರ್ಶಿಯಾಗಿ ಯತೀಶ್ ಕೆ., ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಗೌಡ ಜಾಲ್ನಪು ಆಯ್ಕೆಯಾದರು.

ತಾಲೂಕು ಸಂಘದ ನಿರ್ದೇಶಕ ದಿನೇಶ್ ಬಿ., ಗ್ರಾಮ ಸಮಿತಿ ಮಾಜಿ ಅಧ್ಯಕ್ಷರಾದ ನಾರಾಯಣ ಗೌಡ ವಾದ್ಯಕೋಡಿ, ದಾಮೋದರ ಗೌಡ ಬೆರ್ಕೆ, ನಾರಾಯಣ ಗೌಡ ಮೈಂದಕೋಡಿ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ಉಪನ್ಯಾಸಕ ದಿವ ಕೊಕ್ಕಡ ಉಪಸ್ಥಿತರಿದ್ದರು.

Exit mobile version