Site icon Suddi Belthangady

ಚಾರ್ಮಾಡಿ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಚಾರಣಿಗ ಪತ್ತೆ

ಬೆಳ್ತಂಗಡಿ ತಾಲೂಕು ಮೂಲಕ ಚಾರಣಕ್ಕೆ ತೆರಳಿದ ಬೆಂಗಳೂರು ತಂಡದ ಪೈಕಿ ಓರ್ವ ಯುವಕ ಕೆಲ ಕಾಲ ನಾಪತ್ತೆಯಾದ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

ಬೆಂಗಳೂರು ಮೂಲದ ಮೂವರು ತಂಡದ ಓರ್ವ ಯುವಕ ನೀಡಿದ ಮಾಹಿತಿ ಮೇರೆಗೆ ಭಾನುವಾರ ತಡರಾತ್ರಿ ಪೊಲೀಸರು, ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದರು

ಯುವಕರು ಭಾನುವಾರ ಸಂಜೆ ದುರ್ಗದಹಳ್ಳಿಯಿಂದ ಚಾರಣಕ್ಕೆ ತೆರಳಿದ್ದರು. ಬಳಿಕ ಅವರು, ಚಿಕ್ಕಮಗಳೂರು ಜಿಲ್ಲೆಯ ಕಳಸ ಅರಣ್ಯ ವ್ಯಾಪ್ತಿಯಿಂದ ಸಂಜೆ ಚಾರಣ ಮುಂದುವರಿಸಿದ್ದರು. ಈ ಪೈಕಿ ಒಬ್ಬ ರಾತ್ರಿ ಕಾಣೆಯಾಗಿರುವುದು ತಿಳಿದುಬಂದಿದೆ.

ತಂಡದ ಓರ್ವ ಯುವಕ ನೀಡಿದ ಮಾಹಿತಿ ಮೇರೆಗೆ ಭಾನುವಾರ ತಡರಾತ್ರಿ ಪೊಲೀಸರು, ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸರು ಹುಡುಕಾಟದಲ್ಲಿ ನಡೆಸಿದರು. ಚಾರಣ ತೆರಳಿರುವ ಚಾರ್ಮಾಡಿ ಪ್ರದೇಶದ ಕಾಡಿನಲ್ಲಿ ಆನೆ ಸಂಚಾರ ಹೆಚ್ಚಿರುವುದು ಮಾತ್ರವಲ್ಲದೆ, ಯುವಕರ ಮೊಬೈಲ್ ಸಂಪರ್ಕವೂ ಕಡಿತವಾಗಿರುವುದರಿಂದ ಹುಡುಕಾಟಕ್ಕೆ ಅಡಚರಣೆಯಾಗಿತ್ತು.

ಬಳಿಕ ಆತ ತಡರಾತ್ರಿ ಚಿಕ್ಕಮಗಳೂರು ಪೊಲೀಸರ ಹುಡುಕಾಟದ ವೇಳೆ ಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Exit mobile version