Site icon Suddi Belthangady

ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ದಿವ್ಯಜ್ಯೋತಿ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ತರಬೇತಿ ಕಾರ್ಯಕ್ರಮ

ಕಾಯರ್ತ್ತಡ್ಕ: ಜೆಸಿಐ ಕೊಕ್ಕಡ ಕಪಿಲ ಘಟಕ ಇದರ ವತಿಯಿಂದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತ್ತಡ್ಕ ಇಲ್ಲಿನ ವಿದ್ಯಾರ್ಥಿಗಳಿಗೆ ಗೆಲುವಿಗೆ ಇನ್ನೊಂದೇ ಮೆಟ್ಟಿಲು ಎಂಬ ಶೀರ್ಷಿಕೆಯ ಅಡಿಯಲ್ಲಿ ಪರೀಕ್ಷೆ ಎದುರಿಸುವುದು ಹೇಗೆ ಎಂಬ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.

ಈ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾದ ಜೆ ಸಿ ಐ ವಲಯ ತರಬೇತಿದಾರರಾದ ಜೆಸಿಐ ಸೀನಿಯರ್ ಪ್ರದೀಪ್‌ ಬಾಕಿಲ ನಡೆಸಿಕೊಟ್ಟರು.

ವೇದಿಕೆಯಲ್ಲಿ ಅಧ್ಯಕ್ಷರಾದ ಜೆಸಿ ಎಚ್.ಜಿ.ಎಫ್ ಸಂತೋಷ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ, ಮುಖ್ಯ ಅತಿಥಿಯಾದ ಸಿ| ದಿವ್ಯ ಮರಿಯಾ ಮುಖ್ಯೋಪಾಧ್ಯಾಯರು ಕಾಯರ್ತ್ತಡ್ಕ ಕಾರ್ಯಕ್ರಮದ ನಿರ್ದೇಶಕರಾದ ಜೆ ಸಿ ಪಿ ಟಿ ಸೆಬಾಸ್ಟಿನ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೂರ್ವ ಅಧ್ಯಕ್ಷರಾದ ಜೆ ಸಿ ಜೆ ಎಫ್ ಎಂ ಕೆ ಶ್ರೀಧ‌ರ್ ರಾವ್, ಕೋಶಾಧಿಕಾರಿ ವಿದ್ಯೆಂದ್ರ ಹಾಗೂ ಪ್ರಿಯಾ ಜೆ ಅಮೀನ್, ಶಾಲೆಯ ಶಿಕ್ಷಕ ವೃಂದ ಆಡಳಿತ ಮಂಡಳಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ಜೆಸಿ ಜಾನ್ಸನ್ ವಿತರಿಸಿದರು. ಜೆಸಿ ವಾಣಿ ಜೆಸಿ ಶ್ರವಣ್ ವಾಚಿಸಿದರು. ಜೆಸಿ ಎಚ್ ಜಿ ಎಫ್ ಸಂತೋಷ್‌ ಜೈನ್‌ ಸ್ವಾಗತಿಸಿ, ಜೆ ಸಿ ಪಿಟಿ ಸೆಬಾಸ್ಟಿನ್ ಧನ್ಯವಾದವಿತ್ತರು.

Exit mobile version