Site icon Suddi Belthangady

ವೇಣೂರು: ಭಗವಾನ್ ಬಾಹುಬಲಿ ಮಹಾ ಮಸ್ತಕಾಭಿಷೇಕ-2024: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಂಡದವರಿಂದ ಭೇಟಿ

ವೇಣೂರು: ಫೆ.22 ರಂದು ವಿಧ್ಯುಕ್ತವಾಗಿ ಚಾಲನೆಯಾಗುವ ಇತಿಹಾಸ ಪ್ರಸಿದ್ಧ ವೇಣೂರು ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕದ ಆಟ್ಟೋಳಿಗೆಗೆ ಏರಿ ವೀಕ್ಷಿದ ರಕ್ಷಿತ್ ಶಿವರಾಂರವರು ಇಂತಹ ಪವಿತ್ರವಾದ 12 ವರ್ಷಕ್ಕೊಮ್ಮೆ ನಡೆಯುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವುದು ನನ್ನ ಅದೃಷ್ಟ ಎಂದರು ಹಾಗು ನೋಡಲ್ ಅಧಿಕಾರಿ ಜಯಕೀರ್ತಿ ಜೈನ್ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದ ಹಿರಿಯ ಇಂಜಿನಿಯರ್ ಶಿವಪ್ರಕಾಶ್ ಅಜಿಲರವರೊಂದಿಗೆ ವಿಚಾರ ವಿನಿಮಯ ಮಾಡಿದರು.

ಕಾಶಿಪಟ್ನ ಗ್ರಾಮ ಪಂಚಾಯತ್ ಹಾಗು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸತೀಶ್ ಬಂಗೇರ ಕಾಶಿಪಟ್ನ ,ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಉದ್ಯಮಿ ಹಳ್ಳಿಮನೆ ಪ್ರವೀಣ್ ಫೆರ್ನಾಂಡಿಸ್, ಬೆಳ್ತಂಗಡಿ ಭೂ ನ್ಯಾಯ ಮಂಡಳಿ ಸರಕಾರದಿಂದ ನಾಮ ನಿರ್ದೇಶಿತ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ , ಪ್ರಮುಖರಾದ ಅರವಿಂದ ಶೆಟ್ಟಿ , ದಿನೇಶ್ ಕೋಟಿಯನ್ ಸಾವ್ಯ, ಸುದು ಮಂಜಿಲ, ದಯಾನಂದ ದೇವಾಡಿಗ ಅಳಂತಿಯರ್, ಗಣೇಶ್ ದೇವಾಡಿಗ ಉಪಸ್ಥಿತರಿದ್ದರು.

Exit mobile version