Site icon Suddi Belthangady

ಗುರುವಾಯನಕೆರೆ: ರಮೇಶ ಶೆಟ್ಟಿ ಶಕ್ತಿನಗರ ನಿಧನ

ಬೆಳ್ತಂಗಡಿ: ಮೂಲತಃ ಮುಂಡಾಜೆ ನೆಯ್ಯಾಲು ನಿವಾಸಿ, ಈಶ್ವರ ಶೆಟ್ಟಿ ಅವರ ಪುತ್ರ, ಪ್ರಸ್ತುತ ಗುರುವಾಯನಕೆರೆ ಶಕ್ತಿನಗರದಲ್ಲಿ ನೆಲೆಸಿದ್ದ ರಮೇಶ ಶೆಟ್ಟಿ (53) ಅವರು ಫೆ.20 ರಂದು ಹೃದಯಾಘಾತದಿಂದ ಗುರುವಾಯನಕೆರೆಯಲ್ಲಿ ಮೃತಪಟ್ಟಿದ್ದಾರೆ.‌ವೃತ್ತಿಯಲ್ಲಿ ಅವರು ಟೈಲರಿಂಗ್ ಮಾಡುತ್ತಿದ್ದರು.

ಮೃತರು ಗುರುವಾಯನಕೆರೆ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ವಾಣಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರವನ್ನು ಲಾಯಿಲ ರುದ್ರಭೂಮಿಯಲ್ಲಿ ನಡೆಸಲಾಯಿತು.

Exit mobile version