Site icon Suddi Belthangady

ಬೆಳ್ತಂಗಡಿ ಸಂಭ್ರಮದಲ್ಲಿ ಶಿಕ್ಷಕರಿಗೊಂದು ದಿನ ಕಾರ್ಯಕ್ರಮ ಉದ್ಘಾಟನೆ

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ವತಿಯಿಂದ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ನಡೆಯುತ್ತಿರುವ ಬೆಳ್ತಂಗಡಿ ಸಂಭ್ರಮದ ಅಂಗವಾಗಿ ಫೆ.18 ರಂದು ತಾಲೂಕಿನ ಶಿಕ್ಷಕರಿಗೆ ಹಮ್ಮಿಕೊಂಡಿರುವ ಶಿಕ್ಷಕರಿಗೊಂದು ದಿನ ಕಾರ್ಯಕ್ರಮದ ಉದ್ಘಾಟನೆ ಗುರುವಾಯನಕೆರೆ ಎಕ್ಸೆಲ್ ಕಾಲೇಜು ಆಡಳಿತಾಧಿಕಾರಿ ಸುಮಂತ್ ಜೈನ್ ನೆರವೇರಿಸಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ರಾಜಕೇಸರಿ ತಾಲೂಕು ಅಧ್ಯಕ್ಷ ಸಂದೀಪ್ ಬೆಳ್ತಂಗಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಳ್ತಂಗಡಿ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಎಚ್. ಕೆ., ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು, ಮಂಗಳೂರು ಆಳಕ್ಕೆ ಪ್ರಶಾಂತ್ ಭಂಡಾರಿ, ಪುತ್ತೂರು ಎಸ್ ಎಸ್ ಇವೆಂಟ್ಸ್ ಮಾಲಾಕ ಪ್ರಕಾಶ್, ಭಾಗವಹಿಸಿದ್ದರು.

ಅಖಿಲ ಕರ್ನಾಟಕ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ., ಶಿಕ್ಷಕರು ಹಾಜರಿದ್ದರು.

ರಾಜಕೇಸರಿ ಟ್ರಸ್ಟ್ ಗೌರವ ಸಲಹೆಗಾರ ಪ್ರೇಮ್ ರಾಜ್ ರೋಶನ್ ಸಿಕ್ವರ ನಿರೂಪಿಸಿದರು.

Exit mobile version