Site icon Suddi Belthangady

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್” ಕಾರ್ಯಕ್ರಮ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ಜೇಸಿ ಭವನದಲ್ಲಿ ಜರಗಿತು ಮಂಜುಶ್ರೀ ಅಧ್ಯಕ್ಷ ಜೆಸಿ ರಂಜಿತ್ ಎಚ್ ಡಿ ಅಧ್ಯಕ್ಷತೆಯನ್ನು ವಹಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯಾಭ್ಯಾಸ ಮುಗಿಸಿ E.S. ಆಸ್ಪತ್ರೆ ಬೆಂಗಳೂರು, ಆರೋಗ್ಯ ಕೇಂದ್ರ ಕೊಕ್ಕಡ, ಸಮುದಾಯ ಆರೋಗ್ಯ ಕೇಂದ್ರ ಬೆಳ್ತಂಗಡಿ ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರ, ವೇಣೂರು ಇಲ್ಲಿ ಸುಮಾರು 37 ವರ್ಷಗಳ ಕಾಲ ಬಡರೋಗಿಗಳ ಜೊತೆ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ವಿಜಯ ಕುಮಾರಿ ಕೆ. ಇವರನ್ನು ಗೌರವಿಸಿ ಘಟಕದಲ್ಲಿ ನಡೆದ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ವಲಯದ ಉಪಾಧ್ಯಕ್ಷ JFM ಶಂಕರ್ ರಾವ್ ಬಿ, ಲೇಡಿ ಜೆಸಿ ಸಂಯೋಜಕರಾದ ಜೆಸಿ ಶ್ರುತಿ ರಂಜಿತ್, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ ಪ್ರೀತಮ್ ಶೆಟ್ಟಿ, ಜೆಸಿ ಪ್ರಮೋದ್, ಘಟಕದ ಪೂರ್ವಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ನಂತರ ಜೆಸಿ ಕುಟುಂಬ ಸದಸ್ಯರಿಗೆ “ಜೆಸಿ ಸಂಭ್ರಮ” ಕುಟುಂಬೋತ್ಸವ ಕಾರ್ಯಕ್ರಮವು ಘಟಕದ ಉಪಾಧ್ಯಕ್ಷರಾದ ಪ್ರೀತಮ್ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಜೆಸಿ ಸಚಿನ್ ಸಾಲಿಯಾನ್ ಇವರ ನಿರೂಪಣೆಯೊಂದಿಗೆ ನಡೆಯಿತು.

ವೇದಿಕೆ ಅಹ್ವಾನವನ್ನು ಜೆಸಿ ರಜತ್, ಜೆಸಿ ವಾಣಿನ್ನು ಜೆಸಿ ರಾಮಕೃಷ್ಣ, ಹಾಗೂ ಸನ್ಮಾನ ಪತ್ರವನ್ನು ಜೆಸಿ ಮಾಮಿತಾ ಸುಧೀರ್ ವಾಚಿಸಿದರು. ಕಾರ್ಯದರ್ಶಿ ಜೆಸಿ ಅನುದೀಪ್ ಜೈನ್ ವಂದಿಸಿದರು

Exit mobile version