Site icon Suddi Belthangady

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಹೊರೆಕಾಣಿಕೆ ಸಮರ್ಪಣೆ

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.16ರಂದು ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮಮರ್ದಿನಿ ದೇವಸ್ಥಾನದಿಂದ ಆಡಳಿತ ಮೊಕ್ತೇಸರರಾದ ಎಂ.ವಿಠಲ ಶೆಟ್ಟಿ ಮೂಡಯೂರು ಇವರ ನೇತೃತ್ವದಲ್ಲಿ ಭಕ್ತಾಭಿಮಾನಿಗಳಿಂದ ಒಟ್ಟುಗೂಡಿಸಿದ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯು ನಡೆಯಿತು.

ಈ ಪುಣ್ಯ ಕಾರ್ಯದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ನವೀನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕಾಂತಪ್ಪ ಗೌಡ ಹಟ್ಟತ್ತೋಡಿ, ವರ್ತಕ ಬಂದು ಸಹಕಾರಿ ಸಂಘದ ಅಧ್ಯಕ್ಷರ ಬಿ.ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಅರ್ಚಕರಾದ ಆದಿತ್ಯ ಎಸ್.ರಾವ್, ಕಿಶೋರ್ ಕುಮಾರ್ ಶೆಟ್ಟಿ ಮೂಡಯೂರು, ದಿನೇಶ್ ಪಾಂಗಳ, ಹೇಮಾವತಿ ಶೆಟ್ಟಿ ಬಂಗೇರಕಟ್ಟೆ, ಕುಮಾರ ನಾಯ್ಕ, ಮಂಜುನಾಥ ಶೆಟ್ಟಿ ಪರನೀರು ಹಾಗೂ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Exit mobile version