Site icon Suddi Belthangady

ಚಾರ್ಮಾಡಿ ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ- ಧಾರ್ಮಿಕ ಸಭಾ ಕಾರ್ಯಕ್ರಮ

ಚಾರ್ಮಾಡಿ: ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಹೊಸಮಟ್ಟ ವಹಿಸಿದ್ದರು.

ವಿವೇಕಾನಂದ ಸೇವಾಶ್ರಮದ ಅಧ್ಯಕ್ಷ ಡಾ.ಎಂ.ಎಂ.ದಯಾಕರ್ ಧಾರ್ಮಿಕ ಉಪನ್ಯಾಸವಿತ್ತರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿನಯಚಂದ್ರ ಕೆ, ಶ್ರೀಕಾಂತ್ ಶಾಖಾ ಪ್ರಬಂದಕರು ಕೆನರಾ ಬ್ಯಾಂಕ್ ಕಕ್ಕಿಂಜೆ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಹಲವು ವರ್ಷ ಸೇವೆ ನೀಡಿದ ನಾರಾಯಣ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮನ್ನು ದಿವಿನಿಶ್ ಮೈಕಾನ್ ನಿರೂಪಿಸಿ, ಅಮರೇಂದ್ರ ಕೊಳಂಬೆ ಸ್ವಾಗತಿಸಿ, ಶ್ರೀನಿವಾಸ್ ಕುಲಾಲ್ ಧನ್ಯವಾದವಿತ್ತರು.

Exit mobile version