Site icon Suddi Belthangady

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಕಡಿರ ನಾಗಬನದಲ್ಲಿ ನಾಗದೇವರಿಗೆ ತಂಬಿಲ ಸೇವೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಇತ್ತೀಚೆಗೆ ಪುನಹ ಪ್ರತಿಷ್ಠಾಪಿಸಲ್ಪಟ್ಟ ನಾಗದೇವರಿಗೆ ಕಡಿರ ನಾಗಬನದಲ್ಲಿ ಫೆ.14ರಂದು ಪಂಚಮಿ ಪ್ರಯುಕ್ತ ತಂಬಿಲಸೇವೆ ನಡೆಯಿತು.

ಈ ಬಗ್ಗೆ ಈ ಹಿಂದೆ ಕೃಷ್ಣ ಚಿಂತನೆಯಲ್ಲಿ ಕಂಡುಬಂದಂತೆ ವರ್ಷಂ ಪ್ರತಿ ಮೂಡಪ್ಪ ಸೇವೆಯ ಮರುದಿನ ಪಂಚಮಿಯಂದು ಕ್ಷೇತ್ರದ ವತಿಯಿಂದ ನಾಗದೇವರಿಗೆ ತಂಬಿಲ ಸೇವೆ ನಡೆಸುವಂತೆ ಕಂಡುಬಂದಿತ್ತು.ಆ ಪ್ರಯುಕ್ತ ಇಂದು ಪ್ರಥಮವಾಗಿ ನಿಕಟ ಪೂರ್ವ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದು, ಕ್ಷೇತ್ರದ ಅರ್ಚಕರಾದ ಸುಬ್ರಮಣ್ಯ ತೋಡ್ತಿಲ್ಲಾಯರು ಪೂಜೆಯನ್ನು ನೆರವೇರಿಸಿದರು.

ಕಾರ್ಯನಿರ್ವಾಹ ಣಾಧಿಕಾರಿ ಶ್ರೀನಿವಾಸ ಕೆ ವಿ.ಮತ್ತು ಕೊರಗಪ್ಪ ಶೆಟ್ಟಿ ಮುಂಡ್ರೆಲು, ಬಾಲಕೃಷ್ಣ ನೈಮಿಶ ಹಾಗೂ ಸುಬ್ರಹ್ಮಣ್ಯ ಪರ್ಲಾಯರು ಉಪಸ್ಥಿತರಿದ್ದರು.

Exit mobile version