Site icon Suddi Belthangady

ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಗಿಂಡಾಡಿ ಗುರುರಾಜ್ ಹೆಗ್ಡೆಗೆ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ತಂಡದ ನೆರವು

ಗುರುವಾಯನಕೆರೆ: ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ, ಅಶಕ್ತರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿರುವ ಗುರುವಾಯನಕೆರೆಯ ಶಕ್ತಿನಗರದ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ತಂಡ, ಹೆಪಟೈಟಿಸ್ ಬಿ ಎಂಬ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿಯ ಪೆರೊಡಿತ್ತಾಯಕಟ್ಟೆ ಗ್ರಾಮದ ಗಿಂಡಾಡಿ ನಿವಾಸಿ ಗುರುರಾಜ್ ಹೆಗಡೆಯವರಿಗೆ 25,000 ರೂಪಾಯಿ ನೀಡಿ ನೆರವಾಗಿದೆ.

ಗುರುರಾಜ್ ಹೆಗಡೆಯವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 40ಲಕ್ಷ ರೂಪಾಯಿ ಅಗತ್ಯವಿದೆ.ಈ ತುರ್ತು ಸಂದರ್ಭದಲ್ಲಿ ಸಾಯಿರಾಮ್ ಫ್ರೆಂಡ್ಸ್ ನೆರವಾಗಿದ್ದಾರೆ.

Exit mobile version