Site icon Suddi Belthangady

ಕಾಶಿಬೆಟ್ಟು ಭಗವಾನ್ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ 24ನೇ ವರ್ಷದ ಪ್ರತಿಷ್ಠಾ ಮಹೋತ್ಸವ

ಉಜಿರೆ: ಉಜಿರೆ ಗ್ರಾಮದ ಶ್ರೀ ಕ್ಷೇತ್ರ ಕಾಶಿಬೆಟ್ಟು, ಭಗವಾನ್ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಮಡಂತ್ಯಾರ್ ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಫೆ.10ರಂದು 24ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನವಗ್ರಹ ಶಾಂತಿಯುಕ್ತ ಶನೈಶ್ಚರ ಶಾಂತಿ ಹೋಮವು ಜರಗಿತು.

ಫೆ.9 ರಂದು ರಾತ್ರಿ ದೇವತಾ ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಫೆ.10ರಂದು ಬೆಳಿಗ್ಗೆ ಗಂಟೆ 8.30ಕ್ಕೆ ನವಕ ಪ್ರಧಾನ ಕಲಾಹೋಮ, 10ಕ್ಕೆ ನವಗ್ರ ಶಾಂತಿ ಹೋಮ, ಶನೈಶ್ಚರ ಶಾಂತಿ ಹೋಮ ಪ್ರಾರಂಭ, 12.30ಕ್ಕೆ ಪೂಜೆ, ಪೂರ್ಣಾಹುತಿ, ಮಧ್ಯಾಹ್ನ ಗಂಟೆ 1ಕ್ಕೆ ಶನೈಶ್ಚರ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ನವಗ್ರಹ ಶಾಂತಿ ಮತ್ತು ಶನೈಶ್ಚರ ಶಾಂತಿ ಹೋಮ ನಡೆಯಿತು.

ಕ್ಷೇತ್ರದಲ್ಲಿ ನವಗ್ರಹ ಶಾಂತಿ, ರಾಹು ಬೃಹಸ್ಪತಿ ಸಂಧಿ ಶಾಂತಿಗಳು, ಶುಕ್ರ ಆದಿತ್ಯ ಸಂಧಿ ಶಾಂತಿ, ಕುಜ ರಾಹು ಸಂಧಿ ಶಾಂತಿ, ಕುಂಭ ವಿವಾಹ, ಕದಳಿ ವಿವಾಹ, ಮಹಾ ಮೃತ್ಯುಮಜಯ ಶಾಂತಿಗಳು ನಡೆಯುತ್ತದೆ ಎಂದು ಧರ್ಮದರ್ಶಿ ಜಾತಕ ಮತ್ತು ವಾಸ್ತು ಶಸ್ತ್ರಾಜ್ನ್ಯ ಜನಾರ್ದನ ಆಚಾರ್ಯ ತಿಳಿಸಿದ್ದಾರೆ.

Exit mobile version