Site icon Suddi Belthangady

ಧರ್ಮಸ್ಥಳ: ಶ್ರೀ.ಧ.ಮಂ.ಆಂ.ಮಾ.ಶಾಲೆಗೆ ಮಾತೃಶ್ರೀ ಹೇಮಾವತಿ ಹೆಗ್ಗಡೆ, ಸೋನಿಯಾ ವರ್ಮಾ ಭೇಟಿ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳಕ್ಕೆ ಮಾತೃಶ್ರೀ ಹೇಮಾವತಿ ಹೆಗ್ಗಡೆ ಮತ್ತು ಸೋನಿಯಾ ವರ್ಮಾ ಭೇಟಿ ನೀಡಿ ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು ವಹಿಸಬೇಕಾದ ಕಾಳಜಿ, ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಇಡುವ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ತಿರಸ್ಕರಿಸುವ ವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಬೆಳೆಸುವ ಮಹತ್ವವನ್ನು ತಿಳಿಸಿದರು.ಶಿಸ್ತು ಸಮಯಪಾಲನೆ ಹಾಗೂ ಸ್ವಯಂ ಕೆಲಸ ಮಾಡಿದರೆ ಅದರಿಂದ ಆಗುವ ಲಾಭ ತಿಳಿಯ ಪಡಿಸಿದರು.ಶಾಲೆಯಲ್ಲಿ ಶಬ್ಧ ಮಾಲಿನ್ಯ ಹೇಗೆ ಆಗುತ್ತದೆ, ಅದನ್ನು ವಿದ್ಯಾರ್ಥಿಗಳು ತಡೆಗಟ್ಟುವ ರೀತಿ ಹೇಗೆ ಎಂಬಿತ್ಯಾದಿ ವಿಚಾರಗಳನ್ನು ತಿಳಿಸಿದರು.

ಶಾಲಾ ಪ್ರತಿಯೊಂದು ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿ ಹಲವಾರು ವಿಷಯಗಳ ಮಾಹಿತಿ ನೀಡಿದರು.

Exit mobile version