Site icon Suddi Belthangady

ಕೊಯ್ಯೂರು ಸ.ಪ್ರೌ ಶಾಲೆಗೆ ಹೆಣ್ಣುಮಕ್ಕಳ ಶೌಚಾಲಯ ಹಸ್ತಾಂತರ ಕಾರ್ಯಕ್ರಮ

ಕೊಯ್ಯೂರು: ಸರಕಾರಿ ಪ್ರೌಢ ಶಾಲೆಗೆ ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್ ಬೆಂಗಳೂರು ಇವರ ಸಿ ಎಸ್ ಆರ್ ಫಂಡ್ ವತಿಯಿಂದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಇವರ ಮೂಲಕ  ರೋಟರಿ ಕ್ಲಬ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಕೊಡಲ್ಪಟ್ಟ ಹನ್ನೆರಡು ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ ಆಧುನಿಕ ಸೌಲಭ್ಯದ ಹೆಣ್ಣು ಮಕ್ಕಳ ಶೌಚಾಲಯದ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ರೋಟೇರಿಯನ್ ಡಿಸ್ಟ್ರಿಕ್ಟ್ 3181 ಇದರ ಜಿಲ್ಲಾ ಗವರ್ನರ್  ಮೇಜರ್ ಡೋನರ್ ರೊ.ಕೇಶವ ಹೆಚ್ ಆರ್  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡುತ್ತಾ  ಸ್ವಚ್ಚತೆ ಎಂಬುದು ಎಲ್ಲರ ಹಕ್ಕು ಮತ್ತು ಜೀವನದ  ಅವಿಭಾಜ್ಯ ಅಗತ್ಯವಾಗಿದೆ. ಆದರೆ ನಾವು ಅದನ್ನು ಕಡೆಗಣಿಸುತ್ತೇವೆ.ಕೊಟ್ಟದಾನ ಅದು ಅರ್ಹರಿಗೆ ತಲುಪಿ ಮತ್ತು ಕೊಟ್ಟಂತಹ ದಾನವನ್ನು ಸರಿಯಾಗಿ ಬಳಸಿದರೆ ಅದು ಸಾರ್ಥಕವಾಗುತ್ತದೆ. ಕೊಯ್ಯೂರು ಪ್ರೌಢ ಶಾಲೆಗೆ ನೀಡಿದ ಕೊಡುಗೆ ಸದ್ಭಳಕೆಯಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ವಿದ್ಯಾರ್ಥಿಗಳು ಶಾಲೆಗೆ ಅಂಕಗಳಿಸಲು ಬರಬಾರದು  ಜ್ಞಾನ ಗಳಿಸುವ ಹಂಬಲದಿಂದ ಬಂದು ಜ್ಞಾನವಂತರಾದರೆ  ಪರೀಕ್ಷೆಯಲ್ಲಿ ಹೆಚ್ಚು ಅಂಕವು ಖಂಡಿತಾ ಬರುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಮೋದರ ಗೌಡ ಬೆರ್ಕೆ ವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ ಸ್ವಾಗತಿಸಿದರು.ಮತದಾನ ದಿನಾಚರಣೆಯ ಅಂಗವಾಗಿ ಮತದಾನ ಮಾಡುವ ಬಗ್ಗೆ ಪ್ರತಿಜ್ಞೆ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ  ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇದರ ಡೆಪ್ಯುಟಿ ಜೆನರಲ್ ಮ್ಯಾನೇಜರ್  ಪ್ರಶಾಂತ್ ಜೋಶಿ, ಬೆಳ್ತಂಗಡಿ ರೋಟರಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ , ರೋ. ಅಬೂಬಕ್ಕರ್ ರೊ.ಶ್ರವಣ್ ಕುಮಾರ್, ರೋ ವಿದ್ಯಾ ಕುಮಾರ್, ರೋ ಧನಂಜಯ ರಾವ್, ಸ.ಪ.ಪೂ ಕಾಲೇಜು ಪ್ರಾಂಶುಪಾಲ ಮೋಹನ ಗೌಡ ಉಪಸ್ಥಿತರಿದ್ದರು.ದೀಪ್ತಿ ಹೆಗ್ಡೆ ವಂದಿಸಿದರು.ರಾಮಚಂದ್ರ ದೊಡಮನಿ ನಿರೂಪಸಿದರು.ಬೇಬಿ, ಮೋಹನದಾಸ, ಸುಧಾಕರ ಶೆಟ್ಟಿ  ಪ್ರವೀಣ್ ಕುಮಾರ್ ಹೆಚ್, ಗೀತಾ ಉಡುಪಿ ಸಹಕರಿಸಿದರು.

Exit mobile version