Site icon Suddi Belthangady

ಗುರುವಾಯನಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಪ್ರಶಾಂತ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದು 2024-25 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮೋಹನ್ ಕುಲಾಲ್ ಶಿವಾಜಿನಗರ, ಕಾರ್ಯದರ್ಶಿಯಾಗಿ ಜಯಪ್ರಸಾದ್ ಆಚಾರ್ಯ ಪಾಂಡೇಶ್ವರ,ಕೋಶಾಧಿಕಾರಿಯಾಗಿ ಭವಿತ್ ಶೆಟ್ಟಿ ಖಂಡಿಗ, ಉಪಾಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಅಮರ್ ಜಾಲು, ಶರಣ್ ಕುಲಾಲ್ ಶಿವಾಜಿನಗರ, ಶೋಭಾ ಅಯ್ಯಪ್ಪ ನಗರ, ಜೊತೆ ಕಾರ್ಯದರ್ಶಿಯಾಗಿ ನಿತೀಶ್ ಅದೇಲು, ಆಶಾಲತಾ ತಿಲಕ್ ಕುಲಾಲ್ ಅ¿ ನಗರ, ಗೌರವ ಸಲಹೆಗಾರರಾಗಿ ರವಿ ಪೂಜಾರಿ ಅದೇಲು, ವಸಂತ ಶೆಟ್ಟಿ ಮದ್ದಡ್ಕ, ಅಶ್ವಥ್ ಕುಮಾರ್ ಕೆಲ್ಲಕೆರೆ, ಆನಂದ ಕೋಟ್ಯಾನ್ ಶ್ರೀ ಮಾತಾ, ಸತ್ಯಪಾಲನ್ ನಾಯರ್ ಭುವನೇಶ್ವರಿ ಕೃಪಾ, ರಮೇಶ್ ಪಿ. ಪಣೆಜಾಲು, ವಸಂತ ಗಾರ್ಡಡಿ ಆಯ್ಕೆಯಾದರು.

ಪ್ರಶಾಂತ್ ಕುಲಾಲ್ ಸ್ವಾಗತಿಸಿ, ದಿವಾಕರ ಕೆ. ಅದೇಲು ವಂದಿಸಿದರು.

Exit mobile version