Site icon Suddi Belthangady

ಬುರೂಜ್ ಶಾಲೆಗೆ ಚಿಂತನಾ ಗಣಿತ ಸ್ಪರ್ಧಾ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ

ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ನವೋದಯ ಪ್ರಕಾಶನ ಚಿತ್ರದುರ್ಗದವರು ಸಂಘಟಿಸಿರುವ ಚಿಂತನಾ ಗಣಿತ ಸ್ಪರ್ಧಾ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ.

ಬುರೂಜ್ ಶಾಲೆ “ಉತ್ತಮ ರಾಜ್ಯ ಶಾಲೆ”ಎಂಬ ಮನ್ನಣೆಗೆ ಪಾತ್ರವಾಗಿದ್ದು, ಮಾರ್ಗದರ್ಶಿ ಶಿಕ್ಷಕಿಗೆ “ಬೆಸ್ಟ್ ಗೈಡ್ ಶಿಕ್ಷಕಿ” ಎಂಬ ಪ್ರಶಸ್ತಿ ದೊರಕಿದೆ. ಹತ್ತನೇ ತರಗತಿಯ ಝೋಹರಾ ಇಫಾದ, ಮೂರನೇ ತರಗತಿಯ ಪಿ.ಭವಿಷ್ ರಾಷ್ಟ್ರ ಮಟ್ಟದಲ್ಲಿ ಪ್ರಥಮ, ಒಂಭತ್ತನೇ ತರಗತಿಯ ಪೃಥ್ವಿ, ಏಳನೇ ತರಗತಿಯ ಮುಹಮ್ಮದ್ ಇಝಾನ್ ಇಬ್ರಾಹಿಂ ರಾಜ್ಯ ಮಟ್ಟದಲ್ಲಿ ಪ್ರಥಮ, ಐದನೇ ತರಗತಿಯ ನುಸ್ರತ್ ಬಾನು, ನಾಲ್ಕನೇ ತರಗತಿಯ ಶೇಖ್ ಮುಹಮ್ಮದ್ ರುವೈಫ್ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿರುತ್ತಾರೆ.

ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ಅಭಿನಂದಿಸಿದೆ.

Exit mobile version