Site icon Suddi Belthangady

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸೇವಾ ಕೌಂಟರ್ ಉದ್ಘಾಟನೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸೇವಾ ಕೌಂಟರ್ ಫೆ.2ರಂದು ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ರವರು ಉದ್ಘಾಟಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಕೆನರಾ ಬ್ಯಾಂಕಿನ ನಿವೃತ ಡಿ.ಜಿ.ಎಂ ಉದಯ್ ಭಟ್, ಕೊಕ್ಕಡ ಕೆನರಾ ಬ್ಯಾಂಕ್ ಮ್ಯಾನೇಜರ್ ಅಂಕಿತ್ ಸಿಂಗ್, ದೇವಳದ ಆಡಳಿತ ಅಧಿಕಾರಿ ಕೆವಿ ಶ್ರೀನಿವಾಸ್, ಕುಶಾಲಪ್ಪ ಗೌಡ ಪೂವಾಜೆ, ಇಂಜಿನಿಯರ್ ದಿನೇಶ್ ರಾವ್, ವಿಜಯ್ ಪ್ರಕಾಶ್ ಶುಕ್ಲಾ, ಸುರೇಶ್ ಎಂ, ಗಿರಿಧರ್ ಕಲ್ಲಾಪು, ಬಿಪಿನ್, ಮೋಹನ್ ರಾವ್, ಯತೀಶ್ ಮತ್ತು ಅವಿನಾಶ್(ಇಂಜಿನಿಯರ್), ಪುರಂದರ ಕಡಿರ, ಪ್ರಶಾಂತ್ ಪೂವಾಜೆ, ವಿಠ್ಠಲ್ ಕುರ್ಲೆ, ಸುಬ್ರಹ್ಮಣ್ಯ ತೋಡ್ತಿಲ್ಲಾಯ, ಯಶೋಧಾ, ಹೇಮಾವತಿ, ಅರ್ಚಕರಾದ ಗುರುರಾಜ್ ಉಪ್ಪರ್ಣ, ಸತ್ಯಪ್ರಿಯ ಕಲ್ಲುರಾಯ, ಬಾಲಕೃಷ್ಣ ನೈಮಿಷ ಹಾಗೂ ದೇವಳದ ಸಿಬ್ಬಂದಿ ವರ್ಗ ಮತ್ತು ಭಕ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಳದ ಸೇವಾ ಕೌಂಟರ್ ಗೆ 400 sqf ಗ್ರಾನೈಟ್ ಉಚಿತವಾಗಿ ನೀಡಿದ ದಿನೇಶ್ ರಾವ್ ಬೆಂಗಳೂರು ಹಾಗೂ ದೇವಳದ ಅಭಿವೃದ್ಧಿಯಲ್ಲಿ ಕೆನರಾ ಬ್ಯಾಂಕಿನ ವತಿಯಿಂದ ಕೈ ಜೋಡಿಸಿದ ಉದಯ್.ಕೆ ಮತ್ತು ಅಂಕಿತ್ ಸಿಂಗ್ ದಂಪತಿಗಳನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.

ದೇವಳದ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಸ್ವಾಗತಿಸಿ, ಪುರಂದರ ಕಡೀರ ನಿರೂಪಿಸಿ ಧನ್ಯವಾದವಿತ್ತರು.

Exit mobile version