Site icon Suddi Belthangady

ತಣ್ಣೀರುಪಂತ ಗ್ರಾ.ಪಂ ನ ದ್ವಿತೀಯ ಸುತ್ತಿನ ಗ್ರಾಮಸಭೆ

ತಣ್ಣೀರುಪಂತ: ಗ್ರಾಮ ಪಂಚಾಯತ್ ತಣ್ಣೀರುಪಂತ ಇಲ್ಲಿಯ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಗ್ರಾ.ಪಂ ಅಧ್ಯಕ್ಷೆ ಹೇಮಾವತಿ ಎಂ ಅಧ್ಯಕ್ಷೆತೆಯಲ್ಲಿ ಜ.31ರಂದು ಬಾಪೂಜಿ ಸೇವಾ ಕೇಂದ್ರ ಕಲ್ಲೇರಿಯಲ್ಲಿ ನಡೆಯಿತು.

ನೋಡೆಲ್ ಅಧಿಕಾರಿಯಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.ಕಂದಾಯ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನೆ ಇಲಾಖೆ, ಮೆಸ್ಕಾಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಇಂಜಿನಿಯರಿಂಗ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಅನಿಲ್, ಜಯವಿಕ್ರಮ್, ಸಾಮ್ರಾಟ್, ನವೀನ್ ಕುಮಾರ್, ಫಾತಿಮಾ ಇಶ್ರತ್, ಅಯೂಬ್ ಡಿ.ಕೆ, ಆರತಿ, ದಿವ್ಯಾ, ಫಾತಿಮಾ, ಕೆ.ಎ.ಸಂಬ್ರಿದ್ರಾ, ಕೇಶವ ನಾಯ್ಕ, ಲೀಲಾವತಿ, ಮಹಮ್ಮದ್ ಅಶ್ರಫ್, ಮಹಮ್ಮದ್ ನಿಜಾರ್, ನಫ್ಸಿರಾ, ನವೀನ್, ರಾಕೇಶ್, ಸುಧಾ ಎಂ, ಸುನಂದಾ, ತಾಜುದ್ದೀನ್, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾ.ಪಂ ಸದಸ್ಯ ಚಿದಾನಂದ ಶೆಟ್ಟಿ ಸ್ವಾಗತಿಸಿದರು.ಗ್ರಾ.ಪ್ರಂ ಪಿ.ಡಿ.ಓ.ಶ್ರವಣ್ ಕುಮಾರ್, ಕಾರ್ಯದರ್ಶಿ ಆನಂದ, ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದರು.

Exit mobile version