Site icon Suddi Belthangady

ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಇದರ ವಾರ್ಷಿಕ ಕ್ರೀಡಾಕೂಟ

ಮಂಗಳೂರು: ಉಭಯ ಜಿಲ್ಲೆಗಳ ಮೊಬೈಲ್ ರಿಟೇಲರ್ (ಮಾಲಕರ)ಸಂಘದ ವಾರ್ಷಿಕ ಕ್ರೀಡಾಕೂಟ ಮಂಗಳೂರಿನ ಕೆಪಿಟಿ ಕ್ರಿಡಾಂಗಣದಲ್ಲಿ ಜ.28ರಂದು ನಡೆಯಿತು.

ಕ್ರೀಡಾಕೂಟವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೊಬೈಲ್ ರಿಟೇಲರ್ ಅಸೋಸಿಯೇಶನ್ ಇದರ ಅದ್ಯಕ್ಷ ಮೊಹಮ್ಮದ್ ಮುನೀರ್, ಉಪಾಧ್ಯಕ್ಷ ಉಮೇಶ್ ಬೆಳ್ತಂಗಡಿ ಹಾಗೂ ಕಾರ್ಯದರ್ಶಿ ಅರಿಹಂತ್ ಜೈನ್ ರವರು ಉದ್ಘಾಟಿಸಿದರು.

ಉಭಯ ಜಿಲ್ಲೆಯ ಪ್ರಮುಖ 8 ತಾಲೂಕು ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.ಕ್ರಿಕೆಟ್ ವಿಭಾಗದಲ್ಲಿ ಮಂಗಳೂರು ತಂಡ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಪಡೆಯಿತು.
ಹಗ್ಗಜಗ್ಗಾಟದಲ್ಲಿ ಮೂಡಬಿದಿರೆ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಪಡೆಯಿತು.

ಸಂಚಾಲಕರಾಗಿ ರಿಯಾಜ್ ಮಂಗಳೂರು ಹಾಗೂ ಫ಼ಾರೂಖ್ ಮೂಡಬಿದ್ರೆ ಕ್ರೀಡಾಕೂಟವನ್ನು ನಡೆಸಿಕೊಟ್ಟರು.

ಉಭಯ ಜಿಲ್ಲೆಯ ರಿಟೆಲರ್ ಅಸೊಶಿಯೇಶನ್ ಇದರ ಸ್ಥಾಪಕ ಅಧ್ಯಕ್ಷ ಸಲೀಮ್ ಮೊಬೈಲ್ ಕೇರ್, ಗೌರವ ಅಧ್ಯಕ್ಷ ಗುರುದತ್ ಕಾಮತ್, ಅಧ್ಯಕ್ಷ ಮೊಹಮ್ಮದ್ ಮುನೀರ್, ಕಾರ್ಯದರ್ಶಿ ಅರಿಹಂತ್ ಜೈನ್, ಉಪಾಧ್ಯಕ್ಷ ಉಮೇಶ್ ಬೆಳ್ತಂಗಡಿ, ಕೋಶಾಧಿಕಾರಿ ಮೊಹಮ್ಮದ್ ಅಜ಼ರ್, ಜೊತೆ ಕಾರ್ಯದರ್ಶಿ ರಾಘವೇಂದ್ರ ಕಿನ್ನಿಗೊಳಿ ಮತ್ತು ನಿಕಟ ಪೂರ್ವ ಅಧ್ಯಕ್ಷ ಶೈಲೆಂದ್ರ ಶರಲಾಯ, ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.

Exit mobile version