Site icon Suddi Belthangady

ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

ಮುಂಡಾಜೆ: ತಾಲೂಕು ಮರಾಟಿ ಸಮಾಜ ಸೇವಾ ಸಂಘ (ರಿ.) ಬೆಳ್ತಂಗಡಿ ಇದರ ಜನವರಿ ತಿಂಗಳ ಮಾಸಿಕ ಸಭೆಯು ಸಂಘದ ಉಪಾಧ್ಯಕ್ಷ ವಸಂತ ನಾಯ್ಕರವರ ಸ್ವಗೃಹ ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿ ಜ.28ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಸತೀಶ್ ಹೆಚ್.ಎಲ್.ರವರು ವಹಿಸಿದ್ದರು.

ಸಂಘದ ಕಾರ್ಯದರ್ಶಿ ಪ್ರಸಾದ್ ನಾಯ್ಕ್ ಗತ ಸಭೆಯ ವರದಿಯನ್ನು ವಾಚಿಸಿದರು.ಫೆಬ್ರವರಿ ತಿಂಗಳಲ್ಲಿ ಶೃಂಗೇರಿ ಶಾರದಾ ಪೀಠಕ್ಕೆ ಯಾತ್ರೆ ಕೈಗೊಳ್ಳುವುದು, ಇತ್ತೀಚೆಗೆ ನಿಧನರಾದ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕರಿಗೆ ಶ್ರದ್ಧಾಂಜಲಿ ಸಭೆ ನಡೆಸುವುದು, ಏಪ್ರಿಲ್ ತಿಂಗಳಲ್ಲಿ ಸಂಘದ ವಾರ್ಷಿಕ ಲೆಕ್ಕಪತ್ರ ವರದಿ ತಯಾರಿಸುವುದು.ಸಂಘದ ನೋಂದಣಿ ನವೀಕರಣ ಮಾಡಿಸುವುದು, ವಾರ್ಷಿಕ ಮಹಾಸಭೆ ನಡೆಸುವುದು ಮೊದಲಾದ ನಿರ್ಣಯಗಳನ್ನು ಮಾಸಿಕ ಸಭೆಯಲ್ಲಿ ಕೈಗೊಳ್ಳಲಾಯಿತು.

ಕಾರ್ಯದರ್ಶಿ ಹರೀಶ್ ಪೆರಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ನಾಯ್ಕ್, ಪ್ರಭಾಕರ ನಾಯ್ಕ್ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

ಸಂಘದ ಉಪಾಧ್ಯಕ್ಷ ವಸಂತ ನಾಯ್ಕರವರು ಸ್ವಾಗತಿಸಿ ಎಲ್ಲರನ್ನೂ ಸತ್ಕರಿಸಿದರು.ಕಾರ್ಯಕಾರಿ ಸಮಿತಿಯ ಸದಸ್ಯ ಸುರೇಶ್ ಹೆಚ್.ಎಲ್. ಧನ್ಯವಾದ ಸಲ್ಲಿಸಿದರು.

Exit mobile version