Site icon Suddi Belthangady

ಉಜಿರೆಯ ವೈದಿಕರಿಂದ ಅಯೋಧ್ಯೆಯಲ್ಲಿ ಧಾರ್ಮಿಕ ಹವನ 

ಉಜಿರೆ: ಮೂಲತಃ  ಬೆಳಾಲು “ಶ್ರೀವಾಸ”ನಿಲಯದ  ನಿವಾಸಿ, ಪ್ರಸ್ತುತ ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ.ಸತ್ಯನಾರಾಯಣ ಆಚಾರ್ಯ ಅವರು ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರತಿಷ್ಠಾಪನಾ ಕಾರ್ಯದ ಧಾರ್ಮಿಕ ವಿಧಿ ವಿಧಾನಗಳನ್ವಯ ಜ.23ರಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳವರ ನೇತೃತ್ವದಲ್ಲಿ “ತತ್ವಹೋಮ” ನಡೆಸಿದರು.

ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ವೈದಿಕರು 48 ದಿನದ ಮಂಡಲ ಪೂಜೆಯಲ್ಲಿ ತುಳು ನಾಡಿನ ಧಾರ್ಮಿಕ ಉತ್ಸವದಂತೆ ಶ್ರೀ ಬಾಲರಾಮನ ಉತ್ಸವ ಮೂರ್ತಿಗೆ ನಿತ್ಯ ಪಲ್ಲಕಿ ಉತ್ಸವ, ಶ್ರೀ ವಾದಿರಾಜ ರಚಿತ ತುಳಸಿ ಸಂಕೀರ್ತನೆ ಹಾಗು ಅಷ್ಟಾವಧಾನ ಸೇವೆಯನ್ನು ನಡೆಸಲಾಗುತ್ತಿದೆ.

Exit mobile version