Site icon Suddi Belthangady

ಉಚಿತ ವಾಹನಾ ಚಾಲನ ತರಬೇತಿ-ಉಚಿತ ಡ್ರೈವಿಂಗ್ ಲೈಸೆನ್ಸ್ ಹಸ್ತಾಂತರಿಸುವ ಕಾರ್ಯಕ್ರಮ

ಕುತ್ಲೂರು: ಬೆಳ್ತಂಗಡಿ ಹಾಗೂ ಕಾರ್ಕಳ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ 25 ಯುವಕ ಯುವತಿಯರಿಗೆ ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ ಮುಖಾಂತರ ಉಚಿತ ವಾಹನಾ ಚಾಲನಾ ತರಬೇತಿ ಹಾಗೂ ಉಚಿತ ಡ್ರೈವಿಂಗ್ ಲೈಸೆನ್ಸ್ ಹಸ್ತಾಂತರಿಸುವ ಕಾರ್ಯಕ್ರಮವು ಕುತ್ಲೂರಿನ ಶ್ರೀದೇವಿ ಕೃಪಾ ಕುಕ್ಕುಜೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿಯವರಾದ ಕೆ. ರಾಮಚಂದ್ರ ಭಟ್ ಕಾರ್ಯಕ್ರಮದ ಪ್ರಯೋಜನ ಪಡೆದ ಎಲ್ಲರನ್ನು ಅಭಿನಂದಿಸಿದರು.

ಲೈಸನ್ಸ್ ಅನ್ನು ಹಸ್ತಾಂತರಿಸಿದ ನಾರಾವಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜವರ್ಮ ಜೈನ್ ರವರು WCS ಸಂಸ್ಥೆ, ಅದರ ಅಧಿಕಾರಿಗಳು ಮತ್ತು ಸಮಾಜ ಸೇವ ಕಾರ್ಯಕರ್ತರಾದ ಕೆ .ರಾಮಚಂದ್ರ ಭಟ್ ರವರನ್ನು ಅಭಿನಂದಿಸಿದರು.ತರಬೇತಿ ನೀಡಿದ ಸೀತಾ ಶ್ರೀರಾಮ್ ಡ್ರೈವಿಂಗ್ ಸ್ಕೂಲಿನ ಮಾಲಕ ಲಯನ್ ನಿರಂಜನ್ ಸಂಸ್ಥೆಯ ಕಾರ್ಯ ವೈಕರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇಣೂರು ಲಯನ್ಸ್ ಕ್ಲಬ್ ಕಾರ್ಯದರ್ಶಿಯಾದ ದಯಾನಂದ ಭಂಡಾರಿ ಎಲ್ಲರಿಗೂ ಧನ್ಯವಾದವಿತ್ತರು. ಪ್ರಮೀಳಾ ಆರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ತರಬೇತಿ ನೀಡಿದ ನಿರಂಜನ್ ರವರನ್ನು ಅಭಿನಂದಿಸಲಾಯಿತು.

Exit mobile version