Site icon Suddi Belthangady

ನವೋದಯ ಯುವಕ-ಯುವತಿ ಮಂಡಲದ ಬೆಳ್ಳಿ ಹಬ್ಬದ ಸಂಭ್ರಮ

ಬೆಳ್ತಂಗಡಿ: ಪಕ್ಕಿದಕಲ-ಮೇಲಂತಬೆಟ್ಟು ನವೋದಯ ಯುವಕ ಮತ್ತು ಯುವತಿ ಮಂಡಲದ ಬೆಳ್ಳಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಹಾಗೂ ಮಕ್ಕಳ ಸ್ಪರ್ಧೆಗಳು ಮತ್ತು ಕಬ್ಬಡಿ ಸ್ಪರ್ಧೆಯ ಉದ್ಘಾಟನೆ ಜ.28ರಂದು ನಡೆಯಿತು.

ಎಸ್.ಕೆ.ಡಿ.ಆರ್.ಡಿ.ಪಿ ನಿರ್ದೇಶಕ ಜಯಶಂಕರ ಶರ್ಮ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು.ಅಧ್ಯಕ್ಷತೆಯನ್ನು ನವೋದಯ ಯುವಕ ಮತ್ತು ಯುವತಿ ಮಂಡಲ ಪಕ್ಕಿದಕಲ ಗೌರವಾಧ್ಯಕ್ಷರಾದ ಹೆಚ್.ಮನೋಹರ ಪಡಿವಾಳ ಮಾಪಲಾಡಿ ಅಧ್ಯಕ್ಷತೆಯನ್ನು ವಹಿಸಿಕೊಂಡರು.

ಕಬ್ಬಡಿ ಪಂದ್ಯಾಟದ ಉದ್ಘಾಟನೆಯನ್ನು ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷರಾದ ರಂಜನ್ ಗೌಡ ನೆರೆವೆರಿಸಿದ್ದಾರೆ.ಮುಖ್ಯ ಅತಿಥಿಗಳಾಗಿ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಸವಿತಾ, ಎಸ್.ಕೆ.ಡಿ.ಆರ್.ಪಿ.ಸೇವಾ ಪ್ರತಿನಿಧಿ ಗುಣವಾತಿ, ಮೇಲಂತಬೆಟ್ಟು ಸ್ಪೂರ್ತಿ ಮಹಿಳಾ ಮಂಡಳದ ಅಧ್ಯಕ್ಷರಾದ ಜೆಸಿಂತಾ ಮೋನಿಸಾ, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ರಾದ ದೀಪಿಕಾ ಯೋಗಿಶ್, ಮೇಲಂತಬೆಟ್ಟು ಕೃಷಿಕ ಯುವಕ ಮಂಡಲದ ಅಧ್ಯಕ್ಷರಾದ ಜಗದೀಶ್, ಮೇಲಂತಬೆಟ್ಟು ಶಾಲಾಭಿವೃದ್ಧಿ ಅಧ್ಯಕ್ಷರಾದ ಪ್ರವೀಣ್ ಉಪಸ್ಥಿತರಿದ್ದರು.

Exit mobile version