Site icon Suddi Belthangady

ಕಳೆಂಜ: ಶಿಬರಾಜೆ ಪಾದೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ

ಕಳೆಂಜ: ಇಲ್ಲಿಯ ಶಿಬರಾಜೆಪಾದೆ ಕ್ರೀಡಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಗ್ರಾ. ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಇದರ ಅಧ್ಯಕ್ಷ ಪಿ.ಟಿ ಸೆಬಾಷ್ಟಿನ್‌ ಧ್ವಜಾರೋಹಣವನ್ನು ನೆರವೇರಿಸಿದರು.

ಶಿಬರಾಜೆ ಅಂಗನವಾಡಿಯ ಮಕ್ಕಳಿಗೆ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷೆ ಕೆ.ಶ್ರೀಧ‌ರ್ ರಾವ್ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಶಿಬರಾಜೆ ಅಂಗನವಾಡಿಯ ಬಾಲವಿಕಾಸ ಸಮಿತಿಯ ಅಧ್ಯಕ್ಷ ಪ್ರತಿಮ ನಾರಾಯಣ, ಜೆಸಿಐ ಕಾರ್ಯದರ್ಶಿ ಅಕ್ಷತ್ ರೈ, ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ಎಸ್‌.ನಿತ್ಯಾನಂದ ರೈ, ಕಳೆಂಜ ಗ್ರಾ.ಪಂ. ಸಿಬ್ಬಂದಿ ರಾಜೇಶ್ ಶೆಟ್ಟಿ, ಜೆಜೆಸಿ ಅಧ್ಯಕ್ಷ ಹರ್ಷಿತ್‌ ಗೌಡ, ನಿಡ್ಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ನಿಡ್ಲೆ ಗ್ರಾ.ಪಂ. ಸಿಬ್ಬಂದಿ ಮಮತ ಮಂಜುನಾಥ್, ಪ್ರಗತಿಪರ ಕೃಷಿಕ ಬಾಬು ಗೌಡ, ಜೆಸಿಐನ ಖಜಾಂಜಿ ವಿದ್ಯೇಂದ್ರ ಉಪಸ್ಥಿತರಿದ್ದರು.

ಮಹಿಳಾ ಜೇಸಿ ಅಧ್ಯಕ್ಷೆ ಶೋಭಾ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸಿಐ ಕೊಕ್ಕಡ ಕಪಿಲ ಇದರ ಅಧ್ಯಕ್ಷ ಸಂತೋಷ್ ಜೈನ್‌ ಸ್ವಾಗತಿಸಿದರು. ಶಿಬರಾಜೆ ಪಾದೆ ಅಂಗನವಾಡಿ ಕಾರ್ಯಕರ್ತೆ ಪ್ರಿಯಾ ಜೆ. ಅಮಿನ್ ವಂದಿಸಿದರು.

Exit mobile version