Site icon Suddi Belthangady

ದೊಂಡೋಲೆ ಪರಶುರಾಮ ದೇವಾಲಯದಲ್ಲಿ ಏಕಾಹ ಭಜನಾ ಕಾರ್ಯಕ್ರಮ

ದೊಂಡೋಲೆ: ಇಲ್ಲಿನ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಏಕಾಹ ಭಜನಾ ಕಾರ್ಯಕ್ರಮ ಆರಂಭಗೊಂಡು ನಡೆಯುತ್ತಿದೆ. ಜ.25ರಂದು ಬೆಳಗ್ಗೆ ಸೂರ್ಯೋದಯದ ವೇಳೆ ವೇದಮೂರ್ತಿ ಸತ್ಯಪ್ರಿಯ ಕಲ್ಲೂರಾಯರು, ವೇದಮೂರ್ತಿ ರವಿಕುಮಾರ್ ಭಟ್, ಅನಂತರಾವ್ ಚಾರ್ಮಾಡಿ, ಪುರಂದರ ರಾವ್ ದ್ವೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜ.26ರಂದು ಸೂರ್ಯೋದಯದ ತನಕ ಕಾರ್ಯಕ್ರಮ ನಡೆಯಲಿದೆ

ಆರಂಭದಲ್ಲಿ ಶ್ರೀರಾಮ ಭಜನಾ ಮಂಡಳಿ ದೊಂಡೋಲೆ, ರಕ್ಷಾ ಭಟ್ ಭಜನಾ ಮಂಡಳಿ ಬೆಳ್ತಂಗಡಿ, ಭಗಿನೀ ಜನಾರ್ಧನ ಸ್ವಾಮಿ ಮಹಿಳಾ ಮಂಡಳಿ ಉಜಿರೆ, ಭಕ್ತಪ್ರಿಯ ಭಜನಾ ಮಂಡಳಿ ಕನ್ಯಾಡಿ , ಮಹಮ್ಮಾಯಿ ಭಜನಾ ತಂಡ ಮಾಚಾರ್, ಶ್ರೀ ಮಂಜುನಾಥ ಭಜನಾ ಮಂಡಳಿ ಧರ್ಮಸ್ಥಳ, ಗುರುನರಸಿಂಹ ಭಜನಾ ಮಂಡಳಿ ಕೂಟ ಮಹಾ ಜಗತ್ತು ಮಹಿಳಾ ವೇದಿಕೆ ತಂಡದವರು ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಮುಂದೆ ಸದಾಶಿವೇಶ್ವರ ಭಜನಾ ಮಂಡಳಿ ಸತ್ಯನಪಲ್ಕೆ, ಕಲ್ಮಂಜ, ಸ್ಥಾನಿಕ ಮಹಿಳಾ ಸಂಘ, ಬೆಳ್ತಂಗಡಿ, ಸಿದ್ಧಿವಿನಾಯಕ ಭಜನಾ ಮಂಡಳಿ ನೇಕಾರಪೇಟೆ, ಕನ್ಯಾಕುಮಾರಿ ಭಜನಾ ಮಂಡಳಿ ಧರ್ಮಸ್ಥಳ, ಚಾಮುಂಡೇಶ್ವರಿ ಭಜನಾ ಮಂಡಳಿ ಮುಳಿಕ್ಕಾರು, ಓಂಕಾರೇಶ್ವರ ಭಜನಾ ಮಂಡಳಿ ಪಜಿರಡ್ಕ, ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ, ಮಹಾಲಿಂಗೇಶ್ವರ ಭಜನಾ ಮಂಡಳಿ ಓಡೀಲು, ಸಂದೇಶ್ ಮದ್ದಡ್ಕ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

Exit mobile version