Site icon Suddi Belthangady

ಬೆಳಾಲು ಪ್ರೌಢಶಾಲೆಯಲ್ಲಿ ಕುಮಾರವ್ಯಾಸ ನಮನ, ಮುದ್ದಣ ಸ್ಮರಣೆ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ಕುಮಾರವ್ಯಾಸ ನಮನ ಮತ್ತು ಕವಿ ಮುದ್ದಣರವರ ಸ್ಮರಣೆಯ ಕಾರ್ಯಕ್ರಮ ಜರಗಿತು.

ಈರ್ವರು ಕವಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ಅನಂತರ ಕುಮಾರವ್ಯಾಸನ ಕವಿಕಾವ್ಯ ಪರಿಚಯದಲ್ಲಿ ಕುಮಾರವ್ಯಾಸನ ಪರಿಚಯವನ್ನು ಸುಕನ್ಯಾ ಹತ್ತನೇ ತರಗತಿ, ಮುದ್ದಣ ಪರಿಚಯವನ್ನು ಸೃಷ್ಟಿ ಎಂಟನೇ ತರಗತಿ, ಮುದ್ದಣ ಮನೋರಮೆಯರ ಸಂಭಾಷಣೆಯ ಕಾವ್ಯ ಭಾಗದ ಪ್ರಸ್ತುತಿಯನ್ನು ತೃಷಾ ಜೈನ್ ಮತ್ತು ಸಂಶಿಯ ಎಂಟನೇ ತರಗತಿ ಹಾಗೂ ಕುಮಾರವ್ಯಾಸ ಭಾರತದ ಆಯ್ದ ಕಾವ್ಯ ಭಾಗದಿಂದ ವಾಚನ ಪ್ರವಚನ ಗಮಕ ಕಾರ್ಯಕ್ರಮವನ್ನು ಹತ್ತನೇ ತರಗತಿಯ ಅಮೂಲ್ಯ ಮತ್ತು ಕಿರ್ತನಾ ನಡೆಸಿಕೊಟ್ಟರು.

ಶಿಕ್ಷಕ ಸುಮನ್ ಮಾರ್ಗದರ್ಶನದಲ್ಲಿ ಜರಗಿದ ಈ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದ ಎಂಟನೇ ತರಗತಿಯ ಶ್ರೇಯಸ್ ಸ್ವಾಗತಿಸಿ, ವಂದಿಸಿದರು.

Exit mobile version